Advertisement

Bihar; ಮತ್ತೊಂದು ಸೇತುವೆ ಕುಸಿತ: ನಾಲ್ಕು ತಿಂಗಳಲ್ಲಿ 17ನೇ ಪ್ರಕರಣ

01:38 AM Sep 24, 2024 | Team Udayavani |

ಪಟ್ನಾ: ಬಿಹಾರದಲ್ಲಿ ಸೇತುವೆಗಳ ಕುಸಿತದ ಸರಣಿ ಮುಂದುವರಿದಿದ್ದು, ನಿರ್ಮಾಣ ಹಂತದ ಸೇತುವೆಯ ಭಾಗವೊಂದು ಪಟ್ನಾ ಜಿಲ್ಲೆಯಲ್ಲಿ ಕುಸಿದಿದೆ. ಭಕ್ತಿಯಾರ್‌ಪುರ-ತಾಜ್‌ಪುರ ಗಂಗಾ ಮಹಾಸೇತುವಿನ ಗರ್ಡರ್‌ಗಳಲ್ಲಿನ ಬೇರಿಂಗ್‌ಗಳನ್ನು ಬದಲಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭ ವಿಸಿಲ್ಲ.

Advertisement

2011ರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, 1602.74 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇ ರಿಸಿದ್ದರು. ಈ ಸೇತುವೆ ಕುಸಿತದ ಬಳಿಕ ಕಳೆದ ಜೂನ್‌ನಿಂದ ಬಿಹಾರದಲ್ಲಿ ಕುಸಿದ ಸೇತುವೆಗಳ ಸಂಖ್ಯೆ 17ಕ್ಕೇರಿದೆ. ಅಲ್ಲದೇ ಕಳೆದ ವಾರ ಜಮೂಯಿಯ ಬರ್ನಾರ್‌ ನದಿ ಸೇತುವೆಯು ಒಂದೆಡೆಗೆ ವಾಲಿದ ಘಟನೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next