Advertisement

ಮುಜಾಫರ್ ಪುರ್; ಇಬ್ಬರು ಆರ್ ಜೆಡಿ ಮುಖಂಡರ ಮೇಲೆ ಗುಂಡಿನ ದಾಳಿ

09:49 AM Jun 18, 2019 | Team Udayavani |

ಬಿಹಾರ:ರಾಷ್ಟ್ರೀಯ ಜನತಾ ದಳದ ಇಬ್ಬರು ಮುಖಂಡರನ್ನು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ಬಿಹಾರದ ಮುಜಾಫರ್ ಪುರ್ ಜಿಲ್ಲೆಯ ಕಾಂತಿ ಪ್ರದೇಶದಲ್ಲಿ ಗುರುವಾರ ನಡೆದಿದೆ.

Advertisement

ಆರ್ ಜೆಡಿಯ ಸುರೇಂದ್ರ ಯಾದವ್ ಮತ್ತು ಉಮಾ ಶಂಕರ್ ಪ್ರಸಾದ್ ಸೇರಿದಂತೆ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಒಬ್ಬ ವ್ಯಕ್ತಿಗೆ ಎರಡು ಗುಂಡುಗಳು ತಗುಲಿದ್ದು, ಮತ್ತೊಬ್ಬ ವ್ಯಕ್ತಿಗೆ ನಾಲ್ಕು ಗುಂಡುಗಳು ಬಿದ್ದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿಗೆ ಕಾರಣ ಏನು ಮತ್ತು ಯಾರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next