Advertisement

ಹರ್ಮನ್‌ಪ್ರೀತ್‌ ಪಡೆಗೆ ದೊಡ್ಡ ಸವಾಲು: ಮಲೇಷ್ಯಾ ವಿರುದ್ಧ ಮಹತ್ವದ ಪಂದ್ಯ

11:34 PM Aug 05, 2023 | Team Udayavani |

ಚೆನ್ನೈ: ಏಷ್ಯನ್‌ ಚಾಂಪಿ ಯನ್ಸ್‌ ಟ್ರೋಫಿ ಪಂದ್ಯಾವಳಿಯಲ್ಲಿ ಆತಿಥೇಯ ಭಾರತ ರವಿವಾರ ಟೇಬಲ್‌ ಟಾಪರ್‌ ಮಲೇಷ್ಯಾ ವಿರುದ್ಧ ಸೆಣಸಲಿದೆ. ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವುದು ಹರ್ಮನ್‌ಪ್ರೀತ್‌ ಪಡೆಯ ಎದುರಿಗಿರುವ ದೊಡ್ಡ ಸವಾಲು.

Advertisement

ಚೀನ ವಿರುದ್ಧ 7-2 ಗೋಲುಗಳ ಗೆಲುವಿನ ಆರಂಭ ಪಡೆದಿದ್ದ ಭಾರತ, ಶುಕ್ರವಾರ ಸಾಮಾನ್ಯ ತಂಡವಾದ ಜಪಾನ್‌ ವಿರುದ್ಧ ಜಬರ್ದಸ್ತ್ ಪ್ರದರ್ಶನ ನೀಡಲು ವಿಫ‌ಲವಾಗಿತ್ತು. ಕಾರಣ, ಪೆನಾಲ್ಟಿ ಕಾರ್ನರ್‌ಗಳನ್ನು ವ್ಯರ್ಥಗೊಳಿಸಿದ್ದು. ಚೀನ ವಿರುದ್ಧ 6 ಗೋಲುಗಳನ್ನು ಪೆನಾಲ್ಟಿ ಕಾರ್ನರ್‌ ಮೂಲಕವೇ ಬಾರಿಸಿದ ಭಾರತಕ್ಕೆ ಜಪಾನ್‌ ವಿರುದ್ಧ ಇದನ್ನು ಪುನರಾವರ್ತಿಸಲಾಗಲಿಲ್ಲ. ಕನಿಷ್ಠ 15 ಪೆನಾಲ್ಟಿ ಕಾರ್ನರ್‌ಗಳಲ್ಲಿ ಭಾರತ ಗೋಲಾಗಿಸಿದ್ದು ಒಂದನ್ನು ಮಾತ್ರ. ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌, ಅಮಿತ್‌ ರೋಹಿದಾಸ್‌, ಜುಗ್ರಾಜ್‌ ಸಿಂಗ್‌ ಅವರಂಥ ಘಟಾನುಘಟಿ ಆಟಗಾರರನ್ನು ಹೊಂದಿರುವ ತಂಡಕ್ಕೆ ಇದೊಂದು ಭಾರೀ ಹಿನ್ನಡೆ. ತಂಡದ ಕೋಚ್‌ ಕ್ರೆಗ್‌ ಫುಲ್ಟನ್‌ ಕೂಡ ಈ ವೈಫ‌ಲ್ಯದತ್ತ ಬೆಟ್ಟು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next