Advertisement

BBK11: ಏನೋ ಕಿತ್ತುಕೊಳ್ತೀಯಾ.. ಜಗದೀಶ್ ಮೇಲೆ‌‌ ಮುಗಿಬಿದ್ದ ಬಿಗ್ ಬಾಸ್ ಸಹ ಸ್ಪರ್ಧಿಗಳು..

01:23 PM Oct 16, 2024 | Team Udayavani |

ಬೆಂಗಳೂರು: ಬಿಗ್ ಬಾಸ್ (Bigg Boss) ಮನೆಯಲ್ಲಿ  ಮೂರನೇ ವಾರದ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ.

Advertisement

ನಿನ್ನೆಯ ದಿನ ಮನೆಯ ಕ್ಯಾಪ್ಟನ್ ಶಿಶಿರ್ ಅವರು ಅನುಷಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು.

ನಾನು ಬಗ್ಗಿದರೆ ಹಿಂದಗಡೆ ನೋಡಿ ಯಾರೋ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡ್ತಾನೆ. ನನ್ನ ಇಮೇಜ್ ಡ್ಯಾಮೇಜ್ ಮಾಡೋಕೆ ನಾನಿಲ್ಲಿ ಬಂದಿಲ್ಲ. ಈಗ ಹೋಗ್ತೇನೆ ನಾನು, ನನಗೆ ಗತಿಯಿಲ್ಲದೆ ಇಲ್ಲಿಗೆ ಬಂದಿಲ್ಲ. ನನಗೆ ಯಾರೋ ಹೇಳ್ತಾನೆ ಮೆಂಟಲ್ ನನ್ಮಗ ನಾನಿಲ್ಲಿ ಗತಿಯಿಲ್ಲದೆ ಬಂದಿಲ್ಲ. ನನಗೂ ನಾಲ್ಕು ಜನಕ್ಕೆ ಊಟ ಹಾಕೋ ಯೋಗ್ಯತೆ ಇದೆ. ಬಾಗಿಲು ಓಪನ್ ಮಾಡಿ ಈಗಲೇ ಹೊರಗಡೆ ಹೋಗ್ತೇನೆ. ನನ್ನ ಲಗೇಜ್ ಇಲ್ಲೇ ಇರಲಿ ಎಂದು ಜಗದೀಶ್ ಅವರು ತನ್ನ ಬಗ್ಗೆ ಆಡಿಕೊಳ್ಳುವ ಸಹ ಸ್ಪರ್ಧಿಗಳ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಜಗದೀಶ್ ಅವರು ಮಂಜು ಅವರ ಮೇಲೆ ಪರೋಕ್ಷವಾಗಿ ಜಗದೀಶ್ ಗರಂ ಆಗಿದ್ದಾರೆ. ಕ್ಯಾಮರ ಮುಂದೆ ಕೆಟ್ಟದಾಗಿ ಜಗದೀಶ್ ಮಾತನಾಡಿದ್ದಾರೆ. ತಮ್ಮ ಬಟ್ಟೆಯನ್ನು ಜಗದೀಶ್ ಅವರು ಪ್ಯಾಕ್ ಮಾಡಿ ಬಂದಿದ್ದಾರೆ.

ಇಲ್ಲಿ ವೈಯಕ್ತಿಕವಾಗಿ ಟಾರ್ಗೆಟ್ ಮಾಡೋದಲ್ಲ. ಹಲ್ಕಾ ಮಾತನಾಡೋದಲ್ಲ. ಹೋಗ್ತೇನೆ ಹೋಗ್ತೇನೆ ಅಂಥ ಹೇಳೋದಲ್ಲ. ತಿನ್ನೋ ಊಟಕ್ಕೆ ಗೌರವ ಕೊಡಬೇಕು. ಶೋ ಬಗ್ಗೆ ಇಲ್ಲಸಲ್ಲದ್ದು ಹೇಳೋದಲ್ಲ ಎಂದು ಮಂಜು ಇಲ್ಲಿ ಮುಖಾಮುಖಿಯಾಗಿ ಜಗದೀಶ್ ಗೆ ಹೇಳಿದ್ದಾರೆ.

Advertisement

ತಿವಿಕ್ರಮ್, ಮಂಜು ಜಗದೀಶ್ ನಡುವೆ ಇಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋದ ಪ್ರಸಂಗ ನಡೆಯಿತು. ಈ ವೇಳೆ ಬಿಗ್ ಬಾಸ್ ಕ್ಯಾಪ್ಟನ್ ಗೆ ಕರೆ ಮಾಡಿ, ಪರಿಸ್ಥಿತಿ ತಿಳಿಗೊಳಿಸಲು ಶಿಶಿರ್ ಬಳಿ ಹೇಳಿದ್ದಾರೆ. ಈ ವೇಳೆಶಿಶಿರ್ ಅವರು ಜಗದೀಶ್ ಅವರನ್ನು ಮನವೊಲಿಸುವ ಪ್ರಯತ್ನವನ್ನು ಮಾಡಿದ್ದಾರೆ.

ಜಗದೀಶ್ ಅವರಿಗೆ ಕನ್ ಫೆಶನ್ ರೂಮ್ ಗೆ ಕರೆದಿದ್ದು, ಎಲ್ಲವನ್ನೂ ಕೇಳಿಸಿಕೊಂಡು ಮೌನವಾಗಿ ಕೂತಿದ್ದಾರೆ.

ಚೈತ್ರಾ – ಜಗದೀಶ್ ಫೇಸ್ ಟು ಫೇಸು..
ಆರಂಭಿಕ ವಾರದಲ್ಲಿ ಜೋರಾಗಿಯೇ ಸದ್ದು ಮಾಡಿದ್ದ ಚೈತ್ರಾ ಮೂರನೇ ವಾರದಲ್ಲಿ ಮತ್ತೆ ಸೌಂಡ್ ಮಾಡಿದ್ದಾರೆ. ಜಗದೀಶ್ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.

ಆಕೆ ಏನು ಮಾತಾಡ್ತಾಳೆ ಚೈತ್ರಾ. ಆಕೆಗಲ್ಲ ನನಗೂ ಫಾಲೋವರ್ಸ್ ಇದ್ದಾರೆ. ಆಕೆ ಮೇಲೆ‌ 28 ಕೇಸ್ ಗಳಿವೆ ಎಂದು ಜಗದೀಶ್ ಗರಂ ಆಗಿದ್ದಾರೆ.

ನನ್ನ  ಎದುರುಗಡೆ ನಿಲ್ಲೋ ತಾಕತ್ತಿಲ್ಲ. ಕೊಚ್ಚೆ ಮೇಲೆ ಕಲ್ಲು ಹಾಕಬಾರದು. ತಾಕಿತ್ತಿದ್ರೆ ಎದುರುಗಡೆ ನಿಂತು‌ ಮಾತನಾಡಲಿ. ನನ್ನ ಕೇಸ್ ಬಗ್ಗೆ ಮಾತನಾಡೋ ಯೋಗ್ಯತೆ ಯಾರಿಗೂ ಇಲ್ಲ. 50 ಅಲ್ಲ ನೂರು ಕೇಸ್ ಹಾಕಿಸಿಕೊಳ್ಳುತ್ತೀನಿ. ಇವರ ಅಪ್ಪನಿಗೆ ಹೊಡೆದು ಕೇಸ್ ಹಾಕಿಸಿಕೊಂಡಿಲ್ಲ. ಅಪ್ಪನಿಗೆ ಹುಟ್ಟಿದ್ರೆ ನನ್ನ ಕಣ್ಮುಂದೆ ಬಂದು ನನ್ ಕೇಸ್ ಬಗ್ಗೆ ಮಾತನಾಡಲಿ ಎಂದು ಮುಖಾಮುಖಿ ‌ನಿಂತುಕೊಂಡಿದ್ದಾರೆ.

ಯಾವ ನಾಯಿಗೂ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡೋ ಯೋಗ್ಯತೆ ಇಲ್ಲ. ನಾನು ಮೊನ್ನೆಯಿಂದ ಕಂಟ್ರೋಲ್ ಮಾಡ್ಕೊಂಡು ಇದ್ದೇನೆ. ಇವರ ಅಪ್ಪ.. ಎಂದು ಚೈತ್ರಾ ಜಗದೀಶ್ ಮೇಲೆ ರೇಗಾಡಿದ್ದಾರೆ.

ರಂಜಿತ್ ಅವರು ಜಗದೀಶ್ ಅವರ ಮೇಲೆ ಈ ನನ್ಮಗ ಒದೆ ತಿನ್ನೋಕೆ ಅಂಥಲೇ ಇಲ್ಲಿಗೆ ಬಂದಿದ್ದಾನೆ ಅಂಥ ರೇಗಾಡಿದ್ದಾರೆ.

ಜಗದೀಶ್ ಗೆ ಕಿಚಾಯಿಸಿದ ಸಹ ಸ್ಪರ್ಧಿಗಳು:
ಜಗದೀಶ್ ಅವರು ಕೂತುಕೊಂಡಿದ್ದಾಗ, ಕೆಲ ಸ್ಪರ್ಧಿಗಳು ಅವರನ್ನೇ ನೋಡಿಕೊಂಡು ‘ನನ್ನ ನೀ ಗೆಲ್ಲಲಾರೆ..’ ಎಂದು ಹಾಡು ಹಾಡಿ ಅವರತ್ತ ನೋಡಿ ಕಿಚಾಯಿಸಲು ಯತ್ನಿಸಿದ್ದಾರೆ. ಇತ್ತ‌ ಮಂಜು ಕೂಡ ಇದೇ ರೀತಿ ಮಾಡಿದ್ದು, ಈ ವೇಳೆ ಜಗದೀಶ್ ತಾಳ್ಮೆ ಕಳೆದುಕೊಂಡಿರುವುದನ್ನು ತೋರಿಸಲಾಗಿದೆ.

ಭಾಷೆ ಮೇಲೆ ಹಿಡಿತಾ ಕಳೆದು, ಏನೋ ಕಿತ್ತುಕೊಳ್ತೀಯಾ.. ಮುಂತಾದ ನಿಂದಿಸುವ ಮಾತುಗಳು ಜಗದೀಶ್, ಮಂಜು ನಡುವೆ ಆಗಿರುವುದನ್ನು ತೋರಿಸಲಾಗಿದೆ.

ನಾಮಿನೇಷನ್ ಪ್ರಕ್ರಿಯೆ:
ಮನೆಯವರ ಪೈಕಿ ಮೂವರನ್ನು ಶಿಶಿರ್ ಅವರು ನಾಮಿನೇಟ್ ಮಾಡಿದ್ದಾರೆ. ಹಂಸಾ, ಧನರಾಜ್ ಮತ್ತು ಜಗದೀಶ್, ಧರ್ಮ ಕೀರ್ತಿರಾಜ್, ಗೋಲ್ಡ್ ಸುರೇಶ್, ಗೌತಮಿ,ಚೈತ್ರಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದಲ್ಲದೆ ಅನುಷಾ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ.

ನಾಮಿನೇಟ್ ಅದ ಬಳಿಕ ಧನರಾಜ್ ಅವರು ನಾನು ಬಿಗ್ ಬಾಸ್ ನಲ್ಲಿರುವುದಕ್ಕೆ ಅನ್ ಫಿಟ್ ಇರಬೇಕೆಂದು ಧನರಾಜ್ ಅವರು ಭಾವುಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next