Advertisement

BBK11: ಇವತ್ತು ಅಥವಾ ನಾಳೆ ಈ ರಾಜ್ಯದ ಸಿಎಂ ಆಗುವವನು ನಾನು: ಜಗದೀಶ್

09:56 PM Oct 03, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11) ಕಾರ್ಯಕ್ರಮದಲ್ಲಿ ಸ್ವರ್ಗ ನಿವಾಸಿ ಜಗದೀಶ್ ಅವರ ಆರ್ಭಟ ಜೋರಾಗಿದೆ.

Advertisement

ನಿನ್ನೆ ನಾನು ಆಚೆ ಹೋಗಿ ಬಿಗ್ ಬಾಸ್ ಕಾರ್ಯಕ್ರಮದ ಅಸಲಿ ಮುಖವನ್ನು ಬಯಲು ಮಾಡ್ತೇನೆ ಎಂದಿದ್ದ ಜಗದೀಶ್ ತನ್ನ ಮಾತಿನ ಮಲ್ಲಯುದ್ಧವನ್ನು ಮುಂದುವರೆಸಿದ್ದಾರೆ.

ರಂಜಿತ್ ಅವರೊಂದಿಗೆ ತಾಕತ್, ಯೋಗ್ಯತೆ ಬಗ್ಗೆ ವಾಗ್ವಾದ ನಡೆಸಿದ ಜಗದೀಶ್ ಆದಾದ ಬಳಿಕ ತನ್ನ ಸಾಮರ್ಥ್ಯದ ಬಗ್ಗೆ ಒಬ್ಬರೇ ಮಾತನಾಡಿದ್ದಾರೆ.

ನನ್ನಷ್ಟು ಹೆಣ್ಣ ಮಕ್ಕಳಿಗೆ ಗೌರವ ಕೊಡುವವರು ಯಾರು ಇಲ್ಲ. ಕಂಡವರ ಹೆಣ್ಮು ಮಕ್ಕಳು, ಮಂಚ, ಕುಟುಂಬ, ಆಸ್ತಿ ಬಗ್ಗೆ ಯಾವತ್ತೂ ಕಣ್ಣು ಹಾಕಿದವನಲ್ಲ.

ನನ್ನ ಮನೆಯ ನಾಯಿಗೆ ಒಂದು ಲಕ್ಷ ಖರ್ಚು ಮಾಡ್ತೇನೆ. ನನ್ನ ಯೋಗ್ಯತೆಯನ್ನು ನಾನು ಎಲ್ಲೋ ಹೇಳಿಕೊಳಲ್ಲ. ಇವತ್ತಲ್ಲ ನಾಳೆ ನಾನು ಸಿಎಂ ಅಭ್ಯರ್ಥಿ ಆಗುವವನು. ನಾನು ಇಲ್ಲಿಗೆ ಬರ್ತಾ ಇರಲಿಲ್ಲ. ನಿಮ್ಮ ತಂಡ ನನಗೆ ರಿಕ್ವೆಸ್ಟ್ ಮಾಡಿದ್ದು. ನಾನು ಆಗಿ ಬರಲಿಲ್ಲ.

Advertisement

ಇನ್ನು ಶಿಶಿರ್ ಅವರೊಂದಿಗೆ ವಾಗ್ವಾದ ನಡೆಸಿ್ ಅವರು ಕೆಟ್ಟದಾಗಿ ಏನೋ ಹೇಳಿದ್ದಾರೆ. ಇದಕ್ಕೆ ಶಿಶಿರ್ ಅವರು ತೊಡೆ ತಟ್ಟಿ ಇದು ಪ್ರಸಾರ ಆಗಬೇಕು. ಈ ವ್ಯಕ್ತಿ ಏನು ಅಂಥ ಗೊತ್ತಾಗಬೇಕು ಎಂದಿದ್ದಾರೆ.

ನಾನು ಮನಸ್ಸು ಮಾಡಿದರೆ ಇಡೀ ಬಿಗ್ ಬಾಸ್ ನ್ನೇ ಖರೀದಿಸಬಹುದು ಎಂದು ಜಗದೀಶ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next