Advertisement

BBK10: ದೊಡ್ಮನೆ ಜರ್ನಿ ಮುಗಿಸಿದ ‘ಹಳ್ಳಿಕಾರ್’ ಸಂತೋಷ್

08:32 PM Jan 28, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ಫಿನಾಲೆಯಲ್ಲಿ ಮತ್ತೊಂದು ಸ್ಪರ್ಧಿಯೊಬ್ಬರು  ಮನೆಯಿಂದ ಹೊರಬಂದಿದ್ದಾರೆ.

Advertisement

ನಿನ್ನೆಯ ದಿನ ತುಕಾಲಿ ಸಂತೋಷ್ ಅವರು ಅಂತಿಮ  ಆರು ಜನರಲ್ಲಿ ತುಕಾಲಿ ಸಂತೋಷ್ ಅವರು ಮೊದಲನೇಯವರಾಗಿ ಮನೆಯಿಂದ ಆಚೆ ಬಂದಿದ್ದರು. ವೋಟಿನ ಲೆಕ್ಕಾಚಾರ ಕಡಿಮೆ ಮತ ಪಡೆದ ಅವರು ದೊಡ್ಮನೆ ಜರ್ನಿಯನ್ನು ಮುಗಿಸಿದ್ದಾರೆ. ಇದೀಗ ಮತ್ತೊಬ್ಬರು ಸ್ಪರ್ಧಿ ಆಚೆ ಬಂದಿದ್ದಾರೆ.

ಮನೆಯ ಒಳಗೆ ಹಳೆಯ ಸ್ಪರ್ಧಿ ನಮೃತಾ ಅವರನ್ನು ಕಳುಹಿಸಿ ಅವರ  ಕೈಯಲ್ಲಿರುವ ಚೀಟಿಯನ್ನು ಮನೆಯಿಂದ ಹೊರಬರುವ ಸ್ಪರ್ಧಿಯ ಕೈಗೆ ನೀಡುವ ಮೂಲಕ ಎರಡನೇ ಸ್ಪರ್ಧಿ ಮನೆಯಿಂದ ಆಚೆ ಬಂದಿದ್ದಾರೆ.

ಇಷ್ಟು ಮನೆಯಲ್ಲಿ ತನ್ನದೇ ಛಾಪು ಮೂಡಿಸಿದ್ದ ,ಹಳ್ಳಿಕಾರ್ ಖ್ಯಾತಿಯ ವರ್ತೂರು ಸಂತೋಷ್ ಅವರು ಹೊರ ನಡೆದಿದ್ದಾರೆ. ಆ ಮೂಲಕ ಗೆಲ್ಲುವ ಪ್ರಬಲ ಸ್ಪರ್ಧಿಯೊಬ್ಬರು ಫಿನಾಲೆಯ ಹಂತದಲ್ಲಿ ಹೊರ ನಡೆದಿದ್ದಾರೆ.

ನಾನು ಜನರ ಬೆಂಬಲದಿಂದ ಈಗಾಗಲೇ ಬಿಗ್ ಬಾಸ್ ಗೆದ್ದಿದ್ದೇವೆ ಎನ್ನುವ ಭಾವನೆ ಮೂಡಿದೆ. ಜನರ ತೀರ್ಮಾನ ಏನು ಮಾಡಲು ಆಗಲ್ಲ. ಈ ಜರ್ನಿಯ ಬಗ್ಗೆ ನನಗೆ ತುಂಬಾ ಖುಷಿಯಿದೆ ಎಂದು ವರ್ತೂರು ಹೇಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next