Advertisement

BBK11: ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ ‘ಬಕೆಟ್’ ಜಗಳ

11:05 PM Oct 14, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11)ದ ರೋಚಕವಾಗಿ ಸಾಗುತ್ತಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಮನೆಯಿಂದ ಬಿಗ್ ಬಾಸ್ ಬ್ರೇಕ್ ಪಡೆದುಕೊಂಡಿದ್ದಾರೆ.

Advertisement

“ಇದು ಬಿಗ್‌ ಬಾಸ್‌ ನಿಮ್ಮೆಲ್ಲರ ವರ್ತನೆಯಿಂದ ನನಗೆ ತುಂಬಾ ನೋವಾಗಿದೆ. ಥ್ಯಾಂಕ್ಯೂ ವೆರಿಮಚ್.‌ ಉಡಾಫೆತನ, ಅಪ್ರಾಮಾಣಿಕತನ ನಡವಳಿಕೆಯಿಂದ ಬೇಸತ್ತು ಈ ಕ್ಷಣದಿಂದ ಬಿಗ್ ಬಾಸ್‌ ಈ ಮನೆಯಲ್ಲಿ ಇರಲ್ಲ. ನಾನು ಬ್ರೇಕ್‌ ತೆಗೆದುಕೊಳ್ಳುತ್ತಿದ್ದೇನೆ” ಎಂದು ಬಿಗ್‌ ಬಾಸ್‌ ಕಾಲ್‌ ಮಾಡಿ ಹೇಳಿದ್ದಾರೆ.

ಇದಾದ ಬಳಿಕ ಬಿಗ್ ಬಾಸ್ ಮನೆಯ‌ ನಿಯಮ ಉಲ್ಲಂಘಿಸಿದ್ದಕ್ಕೆ ಮತ್ತೆ ಕಾಲ್ ಮಾಡಿ, ಖಡಕ್ ಎಚ್ಚರಿಕೆ ನೀಡಿದ್ದಾರೆ. ಜಿಮ್ ಮಾಡುವಾಗ ಕೆಲ ಸ್ಪರ್ಧಿಗಳು ಮೈಕ್ ಧರಿಸದೆ ಇದದ್ದಕ್ಕೆ ಬಿಗ್ ಬಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿಶಿರ್ ಕೆಲಸವನ್ನು ಹಂಚುವಾಗ ಜಗದೀಶ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಜಗದೀಶ್ ಅವರು ಮನೆಯಲ್ಲಿನ ಘಟನೆ ನೆನೆದು ಒಬ್ಬರೇ ನಿಂತುಕೊಂಡು ಕಣ್ಣೀರಿಟ್ಟಿದ್ದಾರೆ.

ಸರ್ಪ್ರೈಸ್ ಆಗಿ ತುಕಾಲಿ ಸಂತು ಅವರು ಪತ್ನಿ ಮಾನಸ ಅವರಿಗೆ ಕರೆ ಮಾಡಿ ಆರೋಗ್ಯ ಉಪಚರಿಸಿದ ಪ್ರಸಂಗ ಬಿಗ್ ಬಾಸ್ ಮನೆಯಲ್ಲಿ ನಡೆಯಿತು. ಈ ವೇಳೆ ಮಾನಸ ಅವರು ಭಾವುಕರಾಗಿದ್ದಾರೆ. ತುಕಾಲಿ ಅವರು ಯಾವ ಸ್ಪರ್ಧಿಗಳು ಹೇಗೆ ಆಡುತ್ತಿದ್ದಾರೆ ಎಂದು ಪರೋಕ್ಷವಾಗಿ ಜನರ ಅಭಿಪ್ರಾಯವನ್ನು ತಿಳಿಸಿದ್ದಾರೆ.

Advertisement

ನಾಮಿನೇಷನ್ ಪ್ರಕ್ರಿಯೆ:
ಈ ವಾರ ಮನೆಯಿಂದ ಆಚೆ ಹೋಗಲು ನಾಮಿನೇಷನ್ ಪ್ರಕ್ರಿಯೆ ನಡೆದಿದೆ.  ಶಿಶಿರ್ ಅವರು ಅನುಷಾ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಅವರು ಗೊಂದಲದಲ್ಲಿದ್ದಾರೆ. ಅವರಿಗೆ ಯಾವ ವಿಚಾರ ಎಲ್ಲರ‌ ಮುಂದೆ ಹೇಳಬೇಕು ಹೇಳಬಾರದೆನ್ನುವ ಗೊಂದಲದಲ್ಲಿರುತ್ತಾರೆ. ಅದು ಆಟದ ದಿಕ್ಕನ್ನೇ ಬದಲಾಯಿಸುತ್ತದೆ ಎಂದು ತಮ್ಮ ಕಾರಣವನ್ನು ನೀಡಿದ್ದಾರೆ.

ನಾಮಿನೇಟ್ ಆದವರು ಹಾಗಲಕಾಯಿ ಜ್ಯೂಸ್ ಕುಡಿದಿದ್ದಾರೆ.

ನಾನು ಹಿಂದೆ ಮುಂದೆ ನೋಡಿ ಮಾತನಾಡಲ್ಲ. ಇರುವುದನ್ನು ಹೇಳ್ತೇನೆ ಎಂದು ಅನುಷಾ ಹೇಳಿದ್ದು ಈ ವೇಳೆ ಮಾನಸ ಜತೆ ಮಾತಿನ ಚಕಮಕಿ ನಡೆದಿದೆ.

ನನಗೆ ನಾಮಿನೇಟ್ ಆಗಿದ್ದಕ್ಕೆ ಬೇಸರವಿಲ್ಲ. ಕೊಟ್ಟ ಕಾರಣಕ್ಕೆ ಬೇಸರವಿದೆ ಎಂದು ಧರ್ಮ ಅವರೊಂದಿಗೆ ಮಾತನಾಡುತ್ತಾ ಅನುಷಾ ಭಾವುಕರಾಗಿದ್ದಾರೆ.

ಶಿಶಿರ್ ಗೆ ಅನುಷಾ ಅವರು ಬಕೆಟ್ ಎಂದು ಹೇಳಿದ್ದಾರೆ ಎಂದು ಐಶ್ವರ್ಯಾ ಹೇಳಿದ್ದಾರೆ. ಆದರೆ ತಾನು ಅವರಿಗೆ ಹಾಗೆ ಹೇಳಿಲ್ಲ ಅನುಷಾ ಅವರು ವಾದಿಸಿದ್ದಾರೆ.

ಈ‌ ನಡುವೆ ಮಂಜು ಅವರು ಐಶ್ವರ್ಯಾ ಶಿಶಿರ್ ಬಳಿ ಹೋಗಿ ಫಿಟ್ಟಿಂಗ್ ಇಟ್ಟಿದ್ದಾರೆ ಎಂದು ಅನುಷಾರ ಬಳಿ ಹೇಳಿದ್ದಾರೆ.

ಅನುಷಾ ಅವರ ಮಾತನ್ನು ಶಿಶಿರ್ ಅವರ ಬಳಿ ಐಶ್ವರ್ಯಾ ಹೇಳಿದ್ದಕ್ಕಾಗಿ ಐಶ್ವರ್ಯಾ ಹಾಗೂ ಅನುಷಾ ಜತೆ ಮಾತಿಗೆ ಮಾತು ಬೆಳೆದು ತಾರಕಕ್ಕೇರಿದೆ. ನನಗೆ ನಿನ್ನಹಾಗೆ ಬಕೆಟ್ ಹಿಡಿಯೋಕೆ ಬರಲ್ಲ ಎಂದು ಐಶ್ವರ್ಯಾ ಮೇಲೆ ಅನುಷಾ ರೇಗಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next