Advertisement

BBK10: ಬಿಗ್ ಬಾಸ್ ಫಿನಾಲೆಯಲ್ಲಿ ಸುದ್ದಿಯಾದ ವರ್ತೂರು ಹುಲಿ ಉಗುರು

08:51 PM Jan 27, 2024 | Team Udayavani |

ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 10 ಕಾರ್ಯಕ್ರಮದ ಫಿನಾಲೆಯಲ್ಲಿ ಸ್ಪರ್ಧಿಗಳ ಅನುಭವವನ್ನು ಕೇಳಲಾಗಿದೆ.

Advertisement

ಆರು ಜನ ಸ್ಪರ್ಧೆಗಳಲ್ಲಿ ಫಿನಾಲೆಗೆ ಬಂದ ಕ್ಷಣ ಹಾಗೂ ಕುತೂಹಲದ ಬಗ್ಗೆ ಕೇಳಲಾಗಿದೆ. ಫಿನಾಲೆಗೆ ಬಂದಿದ್ದೇವೆ. ಈ ಮನೆಯಲ್ಲಿ ಕೊನೆಯ ದಿನ ಹಾಗೂ ಇದರ ಬಳಿಕ ಮುಂದೇನು ಎನ್ನುವ ಯೋಚನೆಯಿಂದ ಸರಿಯಾಗಿ ನಿದ್ದೆ ಬಂದಿಲ್ಲ ಎಂದು ವಿನಯ್ ಹೇಳಿದ್ದಾರೆ.

ಈ ಸೀಸನ್ ನಲ್ಲಿ ಸದ್ದು ಮಾಡಿದ ಸ್ಪರ್ಧೆಗಳಲ್ಲಿ ವರ್ತೂರು ಸಂತೋಷ್ ಕೂಡ ಒಬ್ಬರು ಅವರು ಹುಲಿ ಉಗುರು ಧರಿಸಿ, ಜೈಲು ಸೇರಿದ್ದು ಎಲ್ಲೆಡೆ ಸುದ್ದಿಯಾಗಿತ್ತು.

ಹುಲಿ ಉಗುರು ಧರಿಸಿ ಜೈಲಿಗೆ ಹೋಗಿ ಮತ್ತೆ ಬಿಗ್ ಬಾಸ್ ಮನೆಗೆ ವರ್ತೂರು ಬಂದರೂ, ಆ ವಿಚಾರ ಮಾತ್ರ ಮನೆಯೊಳಗೆ ಯಾರಿಗೂ ಗೊತ್ತಾಗಿರಲಿಲ್ಲ. ಅದನ್ನು ವರ್ತೂರು ಆಗಲಿ ಬಿಗ್ ಬಾಸ್ ಬಹಿರಂಗ ಪಡಿಸಿರಲಿಲ್ಲ.

ಫಿನಾಲೆ ವೇದಿಕೆಯಲ್ಲಿ ಈ ಬಗ್ಗೆ ವರ್ತೂರು ಅವರ ಬಳಿ ಹೇಳಿದ್ದಾರೆ. ಒಂದು ನೋವನ್ನು ಮುಚ್ಚಿಕೊಂಡು ಇದ್ದ ಆ ಕ್ಷಣ ಹಾಗೂ ನಿಜಕ್ಕೂ ಆದದ್ದೇನು ಎನ್ನುವುದರ ಬಗ್ಗೆ ವರ್ತೂರು ಅವರ ಬಳಿ ಹೇಳಿ ಎಂದು ಕಿಚ್ಚ ಹೇಳಿದ್ದಾರೆ. ಇದಕ್ಕೆ ವರ್ತೂರು ನೀವೇ ಹೇಳಿ ಎಂದು ಕಿಚ್ಚನ ಬಳಿ ಹೇಳಿದ್ದಾರೆ.

Advertisement

ಇದಕ್ಕೆ ಕಿಚ್ಚ ಅರಣ್ಯಾಧಿಕಾರಿಗಳು ಹುಲಿ ಉಗುರು ಧರಿಸಿದ್ದಕ್ಕೆ ಬಂಧನಕ್ಕೊಳಗಾಗಿದ್ದ ವಿಚಾರವನ್ನು ಎಲ್ಲರ ಮುಂದೆ ಹೇಳಿದರು. ನಿಮ್ಮ ವ್ಯಕ್ತಿತ್ವಕ್ಕೆ ಮೆಚ್ಚಲೇಬೇಕು ಎಂದರು.

ಮನೆಯವರು ವರ್ತೂರು ಅವರ ಈ ವಿಚಾರಕ್ಕೆ ಗೌರವ ತೋರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next