Advertisement

BBK10: ಬಿಗ್ ಬಾಸ್ ಫಿನಾಲೆಯಲ್ಲಿ ಘರ್ಜನೆ ನಿಲ್ಲಿಸಿದ ‘ಆನೆ’ ವಿನಯ್

10:00 PM Jan 28, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್- 10 ಫಿನಾಲೆಯಲ್ಲಿ ಎರಡನೇ ಸ್ಪರ್ಧಿಯಾಗಿ ವರ್ತೂರು ಸಂತೋಷ್ ಅವರು ಹೊರಬಂದಿದ್ದಾರೆ. ಉಳಿದ ನಾಲ್ವರಲ್ಲಿ ಪೈಪೋಟಿ ಉಂಟಾಗಿದೆ.

Advertisement

ಬಿಗ್ ಬಾಸ್ ಟ್ರೋಫಿ ಯಾರು ಗೆಲ್ಲುತ್ತಾರೆ ಎನ್ನುವುದರ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಇದ್ದು, ಮತೊಬ್ಬ ಸ್ಪರ್ಧಿ ಮನೆಯಿಂದ ಔಟಾಗಿದ್ದಾರೆ.

ಸಂಗೀತಾ, ಕಾರ್ತಿಕ್, ವಿನಯ್ ಹಾಗೂ ಪ್ರತಾಪ್ ಅವರಿಗೆ ವೀಕ್ಷಕರ ಅಪಾರ ಬೆಂಬಲವಿದೆ. ಬಂದಿರುವ ಮತಗಳನ್ನು ಪರಿಗಣಿಸಿ ಇದೀಗ ಮೂರನೇ ಸ್ಪರ್ಧಿ ಬಿಗ್ ಬಾಸ್ ಫಿನಾಲೆ ರೇಸ್ ನಿಂದ ಹೊರಬಿದ್ದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಮೊದಲಿನಿಂದಲೂ ತನ್ನ ಏರುಧ್ವನಿಯಿಂದ ಹಾಗೂ ವ್ಯಕ್ತಿತ್ವ ದಿಂದಲೇ ‘ಆನೆ’ಯಾಗಿ ಸದ್ದು ಮಾಡಿದ ವಿನಯ್ ಅವರು ಎಲಿಮಿನೇಟ್ ಆಗಿದ್ದಾರೆ.

ಫಿನಾಲೆವೆರೆಗೂ ‘ಆನೆ’ಯ ಘರ್ಜನೆಯಂತೆಯೇ ದೊಡ್ಮನೆಯಲ್ಲಿ ಸದ್ದು ಮಾಡಿದ ವಿನಯ್ ಮನೆಯಲ್ಲಿ ನಡೆದ ಎಲಿಮಿನೇಟ್ ಪ್ರಕ್ರಿಯೆಯಲ್ಲಿ ಹೊರ ಬಂದಿದ್ದಾರೆ.

Advertisement

ನಾಲ್ಕು ಚಯರ್ ಗಳಲ್ಲಿ ನಾಲ್ವರನ್ನು ಕೂರಿಸಲಾಗಿದೆ. ಅದನ್ನು ರೌಂಡ್ ಆಗಿ ಸುತ್ತಿಸಲಾಗುತ್ತದೆ. ಬಜರ್ ಆಗುವ ವೇಳೆ ಯಾರ ಚಯರ್ ಖಾಲಿ ಇರುತ್ತದೆ ಅವರು ಮನೆಯಿಂದ ಹೊರ ಬರುತ್ತಾರೆ. ಈ ಪ್ರಕ್ರಿಯೆಯಲ್ಲಿ ವಿನಯ್ ಹೊರಗೆ ಬಂದಿದ್ದಾರೆ.

ವೇದಿಕೆಯಲ್ಲಿ ಮಾತಾನಾಡಿದ ವಿನಯ್,ಸ್ವಲ್ಪ ಶಾಕ್ ಆಯಿತು. ವೀಕ್ಷಕರು ತುಂಬಾ ಪ್ರೀತಿ ಕೊಟ್ಟಿದ್ದಾರೆ. ಇವರ ಪ್ರೀತಿ ಇರದಿದ್ದರೆ ನಾನು ಇಲ್ಲಿಯವರೆಗೆ ಬರುತ್ತಿರಿಲ್ಲ. ಇಷ್ಟ ಬೇಗ ನಾನು ಹೊರಗೆ ಬರುತ್ತೇನೆ ಅಂಥ ನಿರೀಕ್ಷೆ ಮಾಡಿರಲಿಲ್ಲ. ನನಗೆ ಚೂರು ಬೇಜಾರ್ ಇದೆ. ಆದರೆ ಹೊರಗಡೆ ಬಂದು ಜನರ ಪ್ರೀತಿಯನ್ನು ಸ್ವೀಕರಿಸಲು ಖುಷಿ ಆಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next