Advertisement

2 ಸಾವಿರ ರೈತರ ಸಾಲ ತೀರಿಸಿದ ಬಿಗ್‌ ಬಿ

02:26 AM Jun 13, 2019 | Sriram |
ಮುಂಬಯಿ: ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಬಿಹಾರದಲ್ಲಿ ಸಾಲದ ಸುಳಿಗೆ ಸಿಲುಕಿದ 2,100 ರೈತರಿಗೆ ನೆರವಾಗಿದ್ದಾರೆ. ಈ ಬಗ್ಗೆ ಅವರೇ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

‘ಸಾಲ ತೀರಿಸುವ ಬಗ್ಗೆ ವಾಗ್ಧಾನ ಮಾಡಿದ್ದೆ. ಸಾಲದ ಸುಳಿಗೆ ಸಿಲುಕಿದ್ದ ಆಯ್ದ 2,100 ಮಂದಿಗೆ ನೆರವು ನೀಡಲು ಪುತ್ರ ಅಭಿಷೇಕ್‌, ಪುತ್ರಿ ಶ್ವೇತಾಗೆ ನಿಗದಿತ ಮೊತ್ತ ನೀಡಿದ್ದೆ. ಬ್ಯಾಂಕ್‌ಗಳಿಗೆ ಒನ್‌ ಟೈಮ್‌ ಸೆಟಲ್ಮೆಂಟ್ ಮೂಲಕ ಅದನ್ನು ನೀಡಲಾಗಿದೆ. ರೈತರನ್ನು ನನ್ನ ನಿವಾಸಕ್ಕೆ ಕರೆಯಿಸಿಕೊಂಡಿದ್ದೆ’ ಎಂದು ಬರೆದುಕೊಂಡಿದ್ದಾರೆ. ಇದರ ಜತೆಗೆ ಪುಲ್ವಾಮಾ ದಾಳಿಯಲ್ಲಿ ದೇಶಕ್ಕಾಗಿ ಪ್ರಾಣ ಕಳೆದುಕೊಂಡ ಯೋಧರ ಕುಟುಂಬ ವರ್ಗಕ್ಕೆ ನೆರವಾಗಬೇಕಾಗಿದೆ ಎಂದಿರುವ ಅವರು, ಈ ಹಿಂದೆ ಉತ್ತರ ಪ್ರದೇಶದ 1,398 ಮತ್ತು ಮಹಾರಾಷ್ಟ್ರದ 350 ಮಂದಿ ರೈತರಿಗೆ ನೆರವಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next