Advertisement

ನೆಮ್ಮದಿ ಜೀವನಕ್ಕೆ ಯೋಗ ಮದ್ದು

01:25 PM Jun 22, 2020 | Naveen |

ಬೀದರ: ವಿಶ್ವ ಯೋಗ ದಿನದ ನಿಮಿತ್ತ ರವಿವಾರ ನಗರದ ಶರಣ ಉದ್ಯಾನದಲ್ಲಿ ಆಯುಷ್‌ ಇಲಾಖೆ ಹಾಗೂ ಬಸವ ಸೇವಾ ಪ್ರತಿಷ್ಠಾನದಿಂದ ಯೋಗಾಭ್ಯಾಸ ಮೂಲಕ ಯೋಗ ದಿನ ಆಚರಿಸಲಾಯಿತು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಬಸವ ಪ್ರತಿಷ್ಠಾನದ ಡಾ| ಗಂಗಾಂಬಿಕಾ ಪಾಟೀಲ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ನೆಮ್ಮದಿಯ ಜೀವನಕ್ಕೆ ಯೋಗ ಸಹಕಾರಿಯಾಗಲಿದೆ ಎಂದರು. ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಶಾರದಾ ಸಾಂಬ್ರೇಕರ್‌ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಗಳ ಬಗ್ಗೆ ವಿವರಿಸಿದರು.

ಆಯುಷ್‌ ವೈದ್ಯಾಧಿಕಾರಿ, ಯೋಗಪಟು ಡಾ| ಲೋಕೇಶ ಮಠ ಯೋಗಾಸನ ಮಾಡಿಸಿದರು. ಯೋಗಾಸನದಲ್ಲಿ ಭಾಗವಹಿಸಿದ್ದ ಜನರಿಗೆ ಆಯುಷ್‌ ಇಲಾಖೆಯಿಂದ ಔಷಧ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next