Advertisement

ಬೀದರ: ತ್ರಿಶತಕ ದಾಟಿದ ಸೋಂಕಿತರು

07:04 AM Jun 13, 2020 | Suhan S |

ಬೀದರ: ಮಹಾರಾಷ್ಟ್ರದ ಕಂಟಕದಿಂದ ಗಡಿ ನಾಡು ಬೀದರನಲ್ಲಿ ಕೋವಿಡ್ ಆರ್ಭಟ ಮುಂದುವರಿದಿದೆ. ಶುಕ್ರವಾರ ಮತ್ತೆ 10 ಪಾಸಿಟಿವ್‌ ಕೇಸ್‌ ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ ತ್ರಿಶತಕ ದಾಟಿದೆ. ಇನ್ನೊಂದೆಡೆ 22 ಜನ ಸೋಂಕಿತರು ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.

Advertisement

ಜಿಲ್ಲೆಯಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 308 ಆದಂತಾಗಿದೆ. ಇದರಲ್ಲಿ 6 ಜನ ಸಾವನ್ನಪ್ಪಿದ್ದರೆ, 203 ಜನ ಬಿಡುಗಡೆ ಹೊಂದಿದ್ದಾರೆ. 99 ಸಕ್ರೀಯ ಪ್ರಕರಣಗಳಿವೆ. ದೆಹಲಿ, ಮಹಾರಾಷ್ಟ್ರ ಸಂಪರ್ಕದಿಂದ ನಲುಗಿ ಹೋಗಿರುವ ಜಿಲ್ಲೆಗೆ ಈಗ ಮಧ್ಯಪ್ರದೇಶದ ನಂಟಿನ ಹೊಸ ಪ್ರಕರಣ ವರದಿಯಾಗಿದೆ. 10 ಜನ ಸೋಂಕಿತರೆಲ್ಲರೂ ಬಸವಕಲ್ಯಾಣ ತಾಲೂಕಿಗೆ ಸೇರಿದ್ದಾರೆ. ದಿನ ಕಳೆದಂತೆ ಪ್ರಕರಣಗಳು ಏರಿಕೆಯಾಗುತ್ತ ಬಸವಕಲ್ಯಾಣ ಕೋವಿಡ್ ಹಾಟ್‌ ಸ್ಪಾಟ್‌ ಆಗಿ ಗುರುತಿಸಿಕೊಳ್ಳುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

ಸೋಂಕಿತರಲ್ಲಿ ನಾಲ್ಕು ವರ್ಷದ 2 ಹಾಗೂ 7 ವರ್ಷದ ಒಬ್ಬ ಮಕ್ಕಳು ಸೇರಿದ್ದಾರೆ. 27 ವರ್ಷದ ಪುರುಷ (ಪಿ-6328), 24 ವರ್ಷದ ಪುರುಷ (ಪಿ-6329), 7 ವರ್ಷದ ಬಾಲಕ (ಪಿ-6330), 34 ವರ್ಷದ ಮಹಿಳೆ (ಪಿ-6331), 4 ವರ್ಷದ ಮಗು (ಪಿ-6332), 35 ವರ್ಷದ ಮಹಿಳೆ (ಪಿ-6363), 4 ವರ್ಷದ ಬಾಲಕಿ (ಪಿ-6364), 25 ವರ್ಷದ ಪುರುಷ (ಪಿ-6335) ಮತ್ತು 56 ವರ್ಷದ ಮಹಿಳೆ (ಪಿ-6337) ರೋಗಿಗಳು ಮಹಾರಾಷ್ಟ್ರದ ನಂಟು ಹೊಂದಿದ್ದರೆ, 55 ವರ್ಷದ ಪುರುಷ (ಪಿ-6336) ರೋಗಿ ಮಧ್ಯ ಪ್ರದೇಶದ ಸಂಪರ್ಕಕ್ಕೆ ಬಂದಿದ್ದರಿಂದ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಹೆಲ್ತ್‌ ಬುಲೆಟಿನ್‌ ದೃಢಪಡಿಸಿದೆ.

3856 ಮಂದಿ ವರದಿ ಬಾಕಿ: ಬೀದರ ಜಿಲ್ಲೆಯಲ್ಲಿ ಇನ್ನೂ ಕೋವಿಡ್ ಶಂಕಿತ 3856 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬರಬೇಕಿದೆ. ಈವರೆಗೆ 31,611 ಜನರ ಸ್ಯಾಂಪಲ್‌ ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 27,447 ಮಂದಿಯದ್ದು ನೆಗೆಟಿವ್‌ ಬಂದಿದೆ. ಸೋಂಕಿತರ ಪ್ರಥಮ ಸಂಪರ್ಕಿತ 2837 ಮತ್ತು ದ್ವಿತೀಯ ಸಂಪರ್ಕಿತ 4100 ಜನರನ್ನು ಗುರುತಿಸಲಾಗಿದೆ. ಕೋವಿಡ್ ಶಂಕಿತ 125 ಜನರು ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೆಲ್ತ್‌ ಬುಲೆಟಿನ್‌ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next