Advertisement

ಬೀದರ: ಜನತಾ ಕರ್ಫ್ಯೂ ಭಾಗಶಃ ಯಶಸ್ವಿ

12:03 PM May 25, 2020 | Naveen |

ಬೀದರ: ಕೋವಿಡ್ ಸೋಂಕು ನಿಯಂತ್ರಣ ಕ್ರಮದ ಭಾಗವಾಗಿ ರಾಜ್ಯ ಸರ್ಕಾರ ಕರೆ ನೀಡಿದ್ದ ‘ರವಿವಾರ ಕರ್ಫ್ಯೂ’ಗೆ ಬೀದರ ಜಿಲ್ಲೆಯಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಲಾಕ್‌ಡೌನ್‌ ಸಡಿಲಕೆ ಬಳಿಕ ಜನ-ವಾಹನ ಸಂಚಾರ ಎಂದಿನಂತೆ ಸಹಜ ಸ್ಥಿತಿಗೆ ಬಂದಿತ್ತು. ಆದರೆ, ರವಿವಾರ ಸರ್ಕಾರದ ಬಂದ್‌ ಕರೆಗೆ ಜಿಲ್ಲೆಯ ಜನರು ಸಹಕರಿಸುವ ಮೂಲಕ ಭಾಗಶಃ ಯಶಸ್ವಿಗೊಳಿಸಿದ್ದಾರೆ. ನಗರ ಸೇರಿ ಕೆಲವೆಡೆ ಬೆರಳಣಿಕೆಯಷ್ಟು ಜನರ ಓಡಾಟ ಮಾತ್ರ ಕಾಣಿಸಿಕ್ಕಿದ್ದು ಹೊರತುಪಡಿಸಿದರೆ ಎಲ್ಲೆಡೆ ಸ್ತಬ್ಧವಾಗಿತ್ತು.

Advertisement

ಬೆಳಗ್ಗೆಯಿಂದಲೂ ಸರ್ಕಾರಿ ಸಾರಿಗೆ ಸೇರಿದಂತೆ ಯಾವುದೇ ಖಾಸಗಿ ವಾಹನಗಳೂ ರಸ್ತೆಗೆ ಇಳಿಯಲಿಲ್ಲ. ಬೈಕ್‌ ಮೇಲೆ ವಿನಾಕಾರಣ ಸುತ್ತುತ್ತಿದ್ದವರನ್ನು ಪೊಲೀಸರು ಎಚ್ಚರಿಕೆ ನೀಡುವ ಮೂಲಕ ವಾಪಸ್‌ ಕಳುಹಿಸುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದಿತು. ಜೀವನಾವಶ್ಯಕ ವಸ್ತುಗಳಿಗಾಗಿ ಕಿರಾಣಿ, ಔಷಧ ಮಳಿಗೆಗಳು, ಹಣ್ಣು- ತರಕಾರಿ ಮಾರಾಟ ಹೊರತುಪಡಿಸಿದರೆ ಎಲ್ಲ ಬಗೆಯ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next