Advertisement

Bidar:‌ ರಸ್ತೆ ಅಪಘಾತ; ಇಬ್ಬರು ಬಲಿ; ಪ್ರಕರಣ ದಾಖಲು

01:16 PM Oct 13, 2024 | Team Udayavani |

ಬೀದರ್: ಬಸವಕಲ್ಯಾಣ ತಾಲೂಕಿನ‌ ಹಳ್ಳಿ ಗ್ರಾಮದ‌ ಬಳಿ‌ ಶನಿವಾರ‌ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ‌ ಇಬ್ಬರು ಮೃತಪಟ್ಟಿರುವ ಘಟನೆ‌ ನಡೆದಿದೆ.

Advertisement

ಹಳ್ಳಿ ಗ್ರಾಮದ ಗುಲಚಂದ್ ಗಾಯಕವಾಡ‌ (41) ಅವರು‌ ರಾಷ್ಟೀಯ ಹೆದ್ದಾರಿ 65 ರ ಬದಿಯಲ್ಲಿ‌ ನಡೆದುಕೊಂಡು‌ ಹೋಗುವಾಗ ಯಮನ ರೂಪದಲ್ಲಿ ಬಂದ‌ ಬೈಕ್ ಸವಾರ ತಾಲೂಕಿನ ಮೊರಖಂಡಿ ಗ್ರಾಮದ‌ ಅಜಯ್ ಪಾಲಂಪಳ್ಳಿ (21) ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಪಾದಚಾರಿ ಜತೆಗೆ ಬೈಕ್‌ ಸವಾರ ಇಬ್ಬರು ಮೃತಪಟ್ಟಿದ್ದಾರೆ.

ಬಸವಕಲ್ಯಾಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next