Advertisement

Bidar; ಹಿಂದಿ ದಿನಾಚರಣೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ

01:50 PM Sep 14, 2024 | Team Udayavani |

ಬೀದರ್:‌ ಹಿಂದಿ ದಿನಾಚರಣೆ ಖಂಡಿಸಿ ನಗರದ ಜಿಲ್ಲಾಧಿಕಾರಿ‌ ಕಚೇರಿ ಎದುರು‌ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆಯಿಂದ‌ ಪ್ರತಿಭಟನೆ‌ ನಡೆಸಲಾಯಿತು. ಕಪ್ಪು‌ ಪಟ್ಟಿ ‌ಧರಿಸಿ‌ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.

Advertisement

ಕರವೇ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ್‌ ನೇತೃತ್ವದಲ್ಲಿ ‌ಜಿಲ್ಲಾಧಿಕಾರಿ ಕಚೇರಿ‌ ಎದುರು‌ ಜಮಾಯಿಸಿದ‌ ಕಾರ್ಯಕರ್ತರು ಪ್ರತಿಭಟನೆ‌ ನಡೆಸಿ ಬಳಿಕ ಜಿಲ್ಲಾಡಳಿತಕ್ಕೆ ಮನವಿ‌ ಸಲ್ಲಿಸಿದರು.

ಕೇಂದ್ರ ಸರ್ಕಾರದ ಸೌಮ್ಯದ ಕಚೇರಿ ಮತ್ತು ಸಂಸ್ಥೆಗಳಲ್ಲಿ ಕಳೆದ 25 ವರ್ಷಗಳಿಂದ ಸೆ. 14 ರಂದು ಹಿಂದಿ‌ ದಿವಸ್ ಆಚರಿಸಲಾಗುತ್ತಿದೆ. ಹಿಂದಿ‌ ಅಧಿಕೃತ ರಾಷ್ಟ್ರ ಭಾಷೆ ಅಲ್ಲ. ಆದರೂ ಉತ್ತರ ಭಾರತದ ರಾಜ್ಯಗಳನ್ನು ಓಲೈಸಿಕೊಳ್ಳಲು ದ್ರಾವಿಡ ಭಾಷೆಗಳ ಮೇಲೆ ಒತ್ತಾಯ ಪೂರ್ವಕವಾಗಿ ಹೇರುವುದು‌ ಸರಿಯಲ್ಲ ಎಂದು‌ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಕರವೇ ಪ್ರಮುಖರಾದ ‌ವಿಶ್ವನಾಥ ಗೌಡ, ವೀರಶೆಟ್ಟಿ ಗೌಸಪುರ್ ಮತ್ತು ವಿರೇಶ ರೆಡ್ಡಿ ಮತ್ತಿತರರು‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next