Advertisement

ಬೀದರ್‌ ಬಂದ್‌;ಪ್ರತಿಭಟನಾ ನಿರತರಿಗೆ ಲಾಠಿ ರುಚಿ 

12:13 PM Jan 09, 2018 | |

ಬೀದರ್‌ : ಪುಣೆಯ ಕೋರೆಗಾಂವ್‌ ಹಿಂಸಾಚಾರ ಖಂಡಿಸಿ ದಲಿತಸಂಘಟನೆಗಳು ಕರೆ ನೀಡಿರುವ ಜಿಲ್ಲಾ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಬಂದ್‌ ಹಿನ್ನಲೆಯಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿಲ್ಲ.ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದ್ದು,ನಗರದಲ್ಲಿ ಸರ್ಕಾರಿ ಬಸ್‌ ಮತ್ತು ಖಾಸಗಿ ಬಸ್‌ಗಳ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ.

ಭಾಲ್ಕಿ,ಹುಮ್ನಾಬಾದ್‌ನಲ್ಲೂ ಬಂದ್‌ ವಾತಾವರಣ ಕಾಣಿಸಿಕೊಂಡಿದೆ.

ಆಂಧ್ರ , ತೆಲಂಗಾಣಕ್ಕೆ ತೆರಳಬೇಕಾಗಿದ್ದ ನೂರಾರು ಪ್ರಯಾಣಿಕರು ಬಸ್‌ಗಳು, ವಾಹನಗಳು ಸಿಗದೆ ಪರದಾಡಬೇಕಾಯಿತು.

ನಗರದಲ್ಲಿ ಪೊಲೀಸರ ಅನುಮತಿ ಮೀರಿ  ಉಗ್ರವಾಗಿ ಪ್ರತಿಭಟಿಸಲು ಮುಂದಾದವರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. 

Advertisement

ಹೆಚ್ಚಿನವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next