Advertisement

Bidar: ಹಣಕ್ಕೆ ಬೇಡಿಕೆ ಇಟ್ಟಿದ್ದ ಎಎಸ್ಐ ಅಮಾನತು

08:37 PM Feb 21, 2024 | Team Udayavani |

ಬೀದರ್ : ಚಿಲ್ಲರೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಹುಲಸೂರು ಪೊಲೀಸ್ ಠಾಣೆಯ‌ ಎಎಸ್ಐ ಶಾವುರಾಜ್ ಅವರನ್ನು ಬುಧವಾರ ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಅ್.ಎಲ್ ಆದೇಶ ಹೊರಡಿಸಿದ್ದಾರೆ.

Advertisement

ಬೇಲೂರು ಗ್ರಾಮದಲ್ಲಿ ಕಬ್ಬು ಸುಟ್ಟು ಹೋಗಿದ್ದರ ಬಗ್ಗೆ ರೈತ ಠಾಣೆಗೆ ದೂರು ನೀಡಿದ್ದರು. ಸ್ಥಳಕ್ಕೆ ಪಂಚನಾಮೆಗೆ ತೆರಳಿದ್ದಾಗ ದೂರುದಾರನೊಂದಿಗೆ ಅನುಚಿತವಾಗಿ ವರ್ತಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಪ್ರಾಥಮಿಕ ತನಿಖೆಯಿಂದ ಹಾಗೂ ವಿಡಿಯೋ ತುಣುಕುಗಳಿಂದ ಸಾಬೀತಾಗಿದೆ. ಕರ್ತವ್ಯದಲ್ಲಿ ಬೇಜವಾಬ್ದಾರಿ ಹಾಗೂ ದುರ್ನಡತೆ ತೋರಿಸಿದ್ದಕ್ಕೆ ಎಎಸ್ಐ ಅವರನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next