Advertisement

ಪೃಥ್ವಿ-ಪ್ರಮೋದ್‌ ಜೊತೆ ಜೊತೆಯಲಿ…ಭುವನ-ಗಗನ ಪ್ರೇಮ ಪುರಾಣ

03:45 PM Jun 25, 2022 | Team Udayavani |

“ಭುವನಂ ಗಗನಂ’- ಹೀಗೊಂದು ಚಿತ್ರ ಇತ್ತೀಚೆಗೆ ಸೆಟ್ಟೇರಿದೆ. ಪೃಥ್ವಿ ಅಂಬರ್‌ ಹಾಗೂ ಪ್ರಮೋದ್‌ ನಾಯಕರಾಗಿರುವ ಈ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿದೆ. ಎಸ್‌ವಿಸಿ ಫಿಲಂಸ್‌ ಎಂಬ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ, ಎಂ.ಮುನೇಗೌಡ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮುಂದೆ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಸಿನಿಮಾ ಮಾಡುವ ಗುರಿ ಹೊಂದಿದ್ದಾರೆ.  ಈ ಹಿಂದೆ ರಾಜರು ಎಂಬ ಚಿತ್ರ ಮಾಡಿದ್ದ ಗಿರೀಶ್‌ ಮೂಲಿಮನಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Advertisement

ಸಿನಿಮಾ ಬಗ್ಗೆ ಮಾತನಾಡುವ ಪ್ರಮೋದ್‌, “ಕ್ಲಾಸ್‌ ಲವ್‌ ಸ್ಟೋರಿ ಇರುವ ಸಿನಿಮಾ ಹುಡುಕುತ್ತಿದ್ದೆ. ಈ ಕಥೆ ಕೇಳಿ ಇಷ್ಟ ಆಗಿದೆ. ನಾನು ಈ ಸಿನಿಮಾದಲ್ಲಿ ಬೇರೆ ರೀತಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಸಿನಿಮಾ ನನಗೆ ಹೊಸ ಇಮೇಜ್‌ ಕೊಡುವ ವಿಶ್ವಾಸವಿದೆ’ ಎಂದರು.

ನಾಯಕ ಪೃಥ್ವಿ ಅಂಬರ್‌ಗೆ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರ ಸಿಕ್ಕಿದೆಯಂತೆ. ಚಿತ್ರದ ಬಗ್ಗೆ ಮಾತನಾಡುವ ಪೃಥ್ವಿ, “ಒಂದು ಒಳ್ಳೆಯ ಸಿನಿಮಾವಾಗಲು ಸಿನಿಮಾವನ್ನು ಪ್ರೀತಿಸುವ ನಿರ್ಮಾಪಕರು, ನಿರ್ದೇಶಕರು ಬೇಕು. ಈ ಸಿನಿಮಾದಲ್ಲಿ ಅವರಿಬ್ಬರೂ ಇದ್ದಾರೆ. ನನಗೆ ಈ ಚಿತ್ರದ ಟೈಟಲ್‌ ಬಹಳ ಇಷ್ಟವಾಯಿತು. ಕಥೆ ನನಗೆ ಬೇಗನೇ ಕನೆಕ್ಟ್ ಆಯಿತು’ ಎಂದು ಚಿತ್ರದ ಬಗ್ಗೆ ಹೇಳಿದರು ಪೃಥ್ವಿ.

ನಿರ್ದೇಶಕ ಗಿರೀಶ್‌ ಮೂಲಿಮನಿ ಅವರಿಗೆ ಇದು ಎರಡನೇ ಸಿ್ನಿಮಾ. “ಇದು ನನ್ನ ಎರಡನೇ ಸಿನಿಮಾ. ಎಸ್‌ವಿಸಿ ಬ್ಯಾನರ್‌ ಅಂದ್ರೆ ಅದು ಡ್ರೀಮ. ಸಿನಿಮಾ ಮಾಡೋದು ಅವರ ಕನಸು. ಎಸ್‌ವಿಸಿ ಬ್ಯಾನರ್‌ನಡಿ ನನಗೆ ಮೊದಲ ಸಿನಿಮಾ ಮಾಡಲು ಅವಕಾಶ ಸಿಕ್ಕಿರೋದು ಖುಷಿ. ನನ್ನ ಹೊಸ ಜರ್ನಿ ಯಶಸ್ವಿಯಾಗುವ ಹಾಗೂ ಒಂದೊಳ್ಳೆಯ ಸಿನಿಮಾ ಕೊಡುವ ವಿಶ್ವಾಸವಿದೆ’ ಎಂದರು.

ನಿರ್ಮಾಪಕ ಎಂ.ಮುನೇಗೌಡ ಅವರಿಗೆ ನಿರ್ದೇಶಕರು ಹೇಳಿದ ಕಥೆ ವಿಭಿನ್ನ ಅನಿಸಿತಂತೆ. ಹಾಗಾಗಿ, ಬಿಗ್‌ ಬಜೆಟ್‌ನಲ್ಲಿ   ಸಿನಿಮಾ ಮಾಡುತ್ತಿರುವುದಾಗಿ ಹೇಳಿದರು.

Advertisement

“ಭುವನಂ ಗಗನಂ’ ಚಿತ್ರ ಲವ್‌, ರೊಮ್ಯಾನ್ಸ್‌, ಫ್ಯಾಮಿಲಿ ಎಮೋಶನ್‌ ಕಥಾಹಂದರದ ಸಿನಿಮಾವಾಗಿದ್ದು, ನಗರ- ಹಳ್ಳಿ ಎರಡು ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುವ ಕಥೆಯಾಗಿದೆ.

ಪ್ರಮೋದ್‌ಗೆ ಜೋಡಿಯಾಗಿ “ಲವ್‌ ಮಾಕ್ಟೇಲ್‌-2′ ಖ್ಯಾತಿಯ ರಚೆಲ್‌ ಡೇವಿಡ್‌ ಹಾಗೂ ಪೃಥ್ವಿಗೆ ಜೋಡಿಯಾಗಿ “ವಾಮನ’ ಸಿನಿಮಾದ ನಾಯಕಿ ರಚನಾ ರೈ ನಟಿಸುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಅಚ್ಯುತ್‌ ಕುಮಾರ್‌, ಶರತ್‌ ಲೋಹಿತಾಶ್ವ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next