Advertisement

Bhutan ಅಡಿಕೆ ಆಮದು ಕಳವಳ ಬೇಡ: ಕ್ಯಾಂಪ್ಕೊ

12:42 AM Aug 08, 2023 | Team Udayavani |

ಮಂಗಳೂರು: ಭೂತಾನ್‌ನಿಂದ ಹಸುರು ಅಡಿಕೆಯನ್ನು ಆಮದು ಮಾಡಿಕೊಳ್ಳುವ ಕೇಂದ್ರ ಸರಕಾರದ ನಿರ್ಧಾರವು ಸ್ಥಳೀಯ ಮಾರುಕಟ್ಟೆಯ ಬೆಲೆಗಳಲ್ಲಿ ಸಂಭಾವ್ಯ ಇಳಿಕೆಯ ಬಗ್ಗೆ ದೇಶೀಯ ರೈತರಲ್ಲಿ ಕಳವಳವನ್ನು ಹುಟ್ಟು ಹಾಕಿರಬಹುದು. ಆದರೆ ಈ ಬಗ್ಗೆ ಕಂಗಾಲಾಗುವ ಅಗತ್ಯವಿಲ್ಲ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್‌ ಕುಮಾರ್‌ ಕೊಡ್ಗಿ ತಿಳಿಸಿದ್ದಾರೆ.

Advertisement

ಭೂತಾನ್‌ನಿಂದ ಹಸುರು ಅಡಿಕೆ ಆಮದು ನಮ್ಮ ದೇಶದ ಒಟ್ಟು ಉತ್ಪಾದನೆಗೆ ಹೋಲಿಸಿದಾಗ ಅತೀ ಕಡಿಮೆ ಇದ್ದು ದೇಶೀಯ ಮಾರುಕಟ್ಟೆ ದರಗಳ ಮೇಲೆ ಪರಿಣಾಮ ಬೀರುವುದಿಲ್ಲ. ಸ್ಥಳೀಯ ರೈತರು ಉತ್ಪಾದಿಸುವ ಬಿಳಿ ಅಡಿಕೆ ಬೆಲೆಯಲ್ಲಿ ಯಾವುದೇ ಪರಿಣಾಮ ಬೀರದು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next