Advertisement

NIA ಅಧಿಕಾರಿಗಳನ್ನು 6 ಗಂಟೆ ಬಾಗಿಲಲ್ಲೇ ಕಾಯಿಸಿದ ಭೂಪ.!

08:47 PM Oct 11, 2023 | Team Udayavani |

ಮುಂಬೈ: ನಿಷೇಧಿತ ಸಂಘಟನೆ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಸಂಬಂಧಿತ ಶೋಧ ಕಾರ್ಯಾಚರಣೆಗೆ ಮುಂದಾಗಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಸಿಬ್ಬಂದಿಯನ್ನು ವ್ಯಕ್ತಿಯೊಬ್ಬ ಬಾಗಿಲು ತೆರೆಯದೇ 6 ಗಂಟೆಗಳ ಕಾಲ ಸತಾಯಿಸಿರುವ ಘಟನೆ ವರದಿಯಾಗಿದೆ.

Advertisement

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಅಲ್ಲಿನ ಶಾಂತಿ ಹದಗೆಡಿಸಿ, ಗಲಭೆ ಸೃಷ್ಟಿಸಲು ಪಿಎಫ್ಐ ಸಂಚು ರೂಪಿಸಿತ್ತು. 2022ರ ಜುಲೈನಲ್ಲಿ ಎನ್‌ಐಎ ಈ ಸಂಬಂಧ ಪ್ರಕರಣ ದಾಖಲಿಸಿತ್ತು. ಈಗ ಅದೇ ತನಿಖೆಯ ಭಾಗವಾಗಿ ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು ಸೇರಿದಂತೆ 6 ರಾಜ್ಯಗಳಲ್ಲಿನ ಶಂಕಿತ ಪಿಎಫ್ಐ ಕಾರ್ಯಕರ್ತರ ನಿವಾಸಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಈ ವೇಳೆ 7/11 ಮುಂಬೈ ರೈಲ್ವೆ ಸ್ಫೋಟ ಪ್ರಕರಣದ ಆರೋಪಿಯಾಗಿದ್ದ ಅಬ್ದುಲ್‌ ವಹೀದ್‌ ಶೇಖ್‌ನ ಮುಂಬೈನ ನಿವಾಸದಲ್ಲೂ ಅಧಿಕಾರಿಗಳು ಶೋಧ ನಡೆಸಲು ಮುಂದಾದಾಗ ವಹೀದ್‌ ಬಾಗಿಲು ತೆರೆಯದೆ ಸತಾಯಿಸಿದ್ದಾನೆ. ಸ್ಥಳಕ್ಕೆ ಆತನ ವಕೀಲರು ಬಂದ ಬಳಿಕ ಬಾಗಿಲು ತೆರೆದಿದ್ದಾನೆಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next