Advertisement

ಮೂರು ಪಂದ್ಯಗಳಿಂದ ಭುವನೇಶ್ವರ್‌ ಔಟ್‌

12:25 AM Jun 18, 2019 | Sriram |

ಮ್ಯಾಂಚೆಸ್ಟರ್‌: ಏಕದಿನ ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ ಭಾರತ ತಂಡಕ್ಕೆ ಮತ್ತೂಂದು ಕಹಿ ಸುದ್ದಿ. ಶಿಖರ್‌ ಧವನ್‌ ಗಾಯಗೊಂಡು ಪಂದ್ಯ ಕಳೆದುಕೊಂಡ ಬೆನ್ನಲ್ಲೇ ಇದೀಗ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಮಂಡಿರಜ್ಜು ಗಾಯಕ್ಕೆ ತುತ್ತಾಗಿ ಮುಂದಿನ 3 ಪಂದ್ಯ ಕಳೆದುಕೊಳ್ಳಲಿದ್ದಾರೆ.

Advertisement

ನಾಯಕ ವಿರಾಟ್‌ ಕೊಹ್ಲಿ ಈ ವಿಷಯನ್ನು ಖಚಿತಪಡಿಸಿದ್ದಾರೆ. ಪಾಕಿಸ್ಥಾನ ವಿರುದ್ಧದ ಪಂದ್ಯದ ವೇಳೆ ಭುವಿ ಗಾಯಕ್ಕೆ ತುತ್ತಾಗಿದ್ದರು. ಮುಂದಿನ ಕೆಲವು ದಿನಗಳು ಅವರು ವಿಶ್ರಾಂತಿ ತೆಗೆದುಕೊಳ್ಳಬೇಕಿರುವುದು ಅನಿವಾರ್ಯವಾಗಿದೆ. ಇವರ ಬದಲಿಗೆ ವೇಗಿ ಮೊಹಮ್ಮದ್‌ ಶಮಿ ಮುಂದಿನ ಪಂದ್ಯದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next