Advertisement

ಕೈದಿಗಳಿಗೆ ಪೌರೋಹಿತ್ಯ ತರಬೇತಿ

12:07 AM Mar 20, 2022 | Team Udayavani |

ಭೋಪಾಲ್‌: ಕೈದಿಗಳು ಸೆರೆಮನೆಯಲ್ಲೇ ಪೌರೋಹಿತ್ಯ ಕಲಿತು, ಹೊರಬಂದ ಅನಂತರ ಅದನ್ನೇ ವೃತ್ತಿಯಾಗಿ ಸ್ವೀಕರಿಸುವಂತಾದರೆ? ಇಂತಹದ್ದೊಂದು ಪ್ರಯೋಗ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

Advertisement

ಮಧ್ಯಪ್ರದೇಶದ ಬಂದೀಖಾನೆ ಇಲಾಖೆಯೊಂದಿಗೆ ಅಖೀಲ ವಿಶ್ವ ಗಾಯತ್ರೀ  ಪರಿವಾರ (ಎವಿಜಿಪಿ) ಕೈಜೋಡಿಸಿದೆ. ಸೆರೆಮನೆಯ ಗ್ರಂಥಾಲ ಯದಲ್ಲಿ ಕೈದಿಗಳಿಗೆ ಮಾ.1ರಿಂದ 31ರ ವರೆಗೆ ಪೌರೋಹಿತ್ಯದ ತರಬೇತಿ ನೀಡುತ್ತಿದೆ. ಈಗಾಗಲೇ ತಾತ್ವಿಕ ತರಗತಿಗಳನ್ನು ಮುಗಿಸಿ, ಪ್ರಾಯೋಗಿಕ ತರಗತಿಗಳನ್ನು ಆರಂಭಿಸಲಾಗಿದೆ.

ಇನ್ನು 6 ತಿಂಗಳು, 2 ವರ್ಷ ಹೀಗೆ ಬಿಡುಗಡೆಗೆ ಸಜ್ಜಾಗಿರುವ ವ್ಯಕ್ತಿಗಳು ಇದನ್ನು ಕಲಿತು ಮುಂದಿನ ಬದುಕನ್ನು ಗೌರವದಿಂದ ನಡೆಸಬೇಕೆನ್ನುವುದು ಎವಿಜಿಪಿ ಉದ್ದೇಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next