Advertisement

*ನದ ಅಳತೆ ಹೇಳಿ ಎಂದ ನಿರ್ದೇಶಕ: ಅಸಭ್ಯ ವರ್ತನೆ ಬಗ್ಗೆ ಮೌನ ಮುರಿದ ನಟಿ

03:36 PM Oct 17, 2022 | Team Udayavani |

ಮುಂಬಯಿ: ಬಾಲಿವುಡ್‌ ನಲ್ಲಿ ಬಿರುಗಾಳಿ ಎಬ್ಬಿಸಿದ ಮೀಟೂ ಪ್ರಕರಣ ಕಳೆದ ಕೆಲ ದಿನಗಳಿಂದ ಮತ್ತೆ ಸುದ್ದಿಯಾಗುತ್ತಿದೆ. ಅದಕ್ಕೆ ಕಾರಣ ಬಿಗ್‌ ಬಾಸ್‌ ಮನೆಯಲ್ಲಿರುವ ನಿರ್ದೇಶಕ ಸಾಜಿದ್‌ ಖಾನ್.‌

Advertisement

2018 ರಲ್ಲಿ ನಿರ್ದೇಶಕ ಸಾಜಿದ್‌ ಖಾನ್‌ ವಿರುದ್ಧ ಮೀಟೂ ಆರೋಪ ಕೇಳಿ ಬಂದಿತ್ತು. ಒಂದೊಂದಾಗಿ ಕೆಲ ನಟಿಯರು ಸಾಜಿದ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. ಆರೋಪದ ಬಳಿಕ ಸಾಜಿದ್‌ ಜನಪ್ರಿಯತೆ ಕುಗ್ಗಿತ್ತು. ಅಷ್ಟಾಗಿ ಕಾಣಿಸಿಕೊಳ್ಳದ ಸಾಜಿದ್‌ ಹಿಂದಿ ಬಿಗ್‌ ಬಾಸ್‌ 16ನೇ ಸೀಸನ್‌ ನಲ್ಲಿ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ.

ಬಿಗ್‌ ಬಾಸ್‌ ನಲ್ಲಿ ಮೀಟೂ ಆರೋಪಿ ಸಾಜಿದ್‌ ಖಾನ್‌ ಭಾಗಿಯಾಗಿರುವುದಕ್ಕೆ  ನಟಿಯರು ಮತ್ತೆ ಸಾಜಿದ್‌ ವಿರುದ್ಧ ಧ್ವನಿ ಎತ್ತಿ, ಅವರನ್ನು ಕಾರ್ಯಕ್ರಮದಿಂದ ಹೊರ ಕಳುಹಿಸಸಬೇಕೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆಲ ದಿನಗಳ ಹಿಂದೆ ನಟಿ ಶೆರ್ಲಿನ್ ಚೋಪ್ರಾ ಟ್ವಿಟರ್‌ ನಲ್ಲಿ ನಿರ್ದೇಶಕ ಸಾಜಿದ್‌ ಖಾನ್‌ ಅವರ ಅಸಭ್ಯ ವರ್ತನೆ ಬಗ್ಗೆ ಬರೆದುಕೊಂಡಿದ್ದರು. ಈಗ ಮತ್ತೊಬ್ಬ ನಟಿ ಸಾಜಿದ್‌ ಖಾನ್‌ ವಿರುದ್ಧ ಹರಿಹಾಯ್ದಿದ್ದಾರೆ.ಭೋಜ್ ಪುರಿ ನಟಿ ರಾಣಿ ಚಟರ್ಜಿ ಸಂದರ್ಶನವೊಂದರಲ್ಲಿ ನಿರ್ದೇಶಕ ಸಾಜಿದ್‌ ಖಾನ್‌ ತನ್ನ ಜೊತೆ ಅಸಭ್ಯವಾಗಿ ವರ್ತಿಸಿಕೊಂಡ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: ಅತಿರೇಕದ ವರ್ತನೆಯೊಂದಿಗೆ “ಕಾಂತಾರ” ವಿಮರ್ಶೆ ಮಾಡಿದ ಯೂಟ್ಯೂಬರ್: ಹಲವರ ಆಕ್ರೋಶ‌

Advertisement

“ಹಿಮ್ಮತ್ ವಾಲಾ” ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಸಾಜಿದ್‌ ಖಾನ್‌ ಫೋನಿನಲ್ಲಿ ನಾನು ನಿಮ್ಮನ್ನು ನೇರವಾಗಿ ಭೇಟಿಯಾಗಬೇಕು. ನಿಮ್ಮ ಮ್ಯಾನೇಜರ್‌, ಸಹಾಯಕಿ ಜೊತೆ ನೀವು ಬರಬೇಡಿ. ಒಬ್ಬರೇ ಬನ್ನಿ ಎಂದು ಹೇಳಿದ್ದರು. ನಾನು ಸಾಜಿದ್‌ ಖ್ಯಾತ ನಿರ್ದೇಶಕ ಆಗಿದ್ದರಿಂದ ಆಯಿತೆಂದು ಅವರನ್ನು ಭೇಟಿಯಾಗಲು ಹೋಗಿದ್ದೆ. ನಾನು ಅವರ ಜೂಹು ನಿವಾಸಕ್ಕೆ ಹೋದೆ. ಆಗ ಅವರು ಒಬ್ಬರೇ ಅಲ್ಲಿದ್ದರು. ನಿಮ್ಮನ್ನು ನಾನೊಂದು ಐಟಂ ಸಾಂಗ್‌ ವೊಂದರಲ್ಲಿ ಕಾಸ್ಟ್‌ ಮಾಡಬೇಕು. ಅದರಲ್ಲಿ ನೀವು ಅರ್ಧ ಲೆಹೆಂಗಾವನ್ನು ಹಾಕಬೇಕು. ನಿಮ್ಮ ಕಾಲುಗಳನ್ನು ನೋಡಬೇಕು ಎಂದು ಹೇಳಿದ್ದಾರೆ. ನಾನು ಮೊಣಕಾಲಿನವರೆಗೆ ಕಾಲುಗಳನ್ನು ತೋರಿಸಿದೆ. ಆದರೆ ಅವರು ಮುಂದುವರೆದು ನಿಮ್ಮ ವಕ್ಷ ಸ್ಥಲದ ಅಳತೆ ಹೇಳಿ ಎಂದು ಕೇಳಿದರು. ಭಯಬೇಡಿ ಎಂದು ಹೇಳಿ ನನ್ನ ಮೈ ಮುಟ್ಟಲು ಪ್ರಯತ್ನಿಸಿದರು ಆ ಕ್ಷಣದಿಂದಲೇ ನಾನು ಅಲ್ಲಿಂದ ಹೊರಬಂದೆ”ಎಂದು ರಾಣಿ ಹೇಳಿದರು.

ಅನುಚಿತವಾಗಿ ವರ್ತಿಸುತ್ತಿದ್ದೀರಿ. ಇಂದೆಂಥ ಕೆಟ್ಟ ಪ್ರಶ್ನೆಯೆಂದು ಹೇಳಿ, ರಾಣಿ ನಿರ್ದೇಶಕನ ಮುಖಕ್ಕೆ ಬೈದು ಮನೆಯಿಂದ ಹೊರಬಂದೆ ಎಂದು ಹಳೆಯ ಘಟನೆ ಬಗ್ಗೆ ಹೇಳಿದ್ದಾರೆ. ನಟಿ ಶೆರ್ಲಿನ್ ಚೋಪ್ರಾ, ಮಂದನಾ ಕರಿಮಿ, ಅಹನಾ ಕುಮ್ರಾ, ಕಾನಿಷ್ಕಾ ಸೋನಿ ಮುಂತಾದವರು ಸಾಜಿದ್‌ ಖಾನ್‌ ಅವರ ಅಸಭ್ಯ ವರ್ತನೆ ಬಗ್ಗೆ ಆರೋಪ ಮಾಡಿದ್ದರು.

ಕೆಲ ದಿನಗಳ ಹಿಂದೆ ಜೋರಾಗಿ ಕೇಳಿ ಬರುತ್ತಿರುವ ಮೀಟೂ ಆರೋಪದಿಂದ ಸಾಜಿದ್‌ ಅವರನ್ನು ಬಿಗ್‌ ಬಾಸ್‌ ಮನೆಯಿಂದ ಹೊರ ಕಳುಹಿಸಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ವರದಿಯ ಪ್ರಕಾರ ಅದು ಸುಳ್ಳೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next