Advertisement

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

12:55 AM Sep 17, 2024 | Team Udayavani |

ಹೊಸದಿಲ್ಲಿ: ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ ಎಂದು ಸಂಸದೆ, ನಟಿ ಕಂಗನಾ ರಣಾವತ್‌ ಹೇಳಿದ್ದಾರೆ. ಅವರ ಸಿನೆಮಾ “ಎಮರ್ಜನ್ಸಿ’ ಬಿಡುಗಡೆಗೆ ಸಾಕಷ್ಟುತೊಡಕು ಗಳು ಎದುರಾಗಿದ್ದು ಈ ಬಗ್ಗೆ ನಟಿ ಪ್ರತಿಕ್ರಿಯಿಸಿದ್ದಾರೆ. ಇತಿಹಾಸವನ್ನು ಉದ್ದೇಶಪೂರ್ವಕವಾಗಿ ಮುಚ್ಚಿಡಲಾಗಿದೆ. ನಮ್ಮ ಸಿನೆಮಾ ಬಿಡುಗಡೆಗೆ ಸಿದ್ಧವಾಗಿದೆ. ಕೆಲವರು ಭಿಂದ್ರ ನ್‌ವಾಲೆಯನ್ನು ಕ್ರಾಂತಿಕಾರಿ ಎಂದು ನಂಬಿದ್ದು, ಅವರಿಂದ ಬೆದರಿಕೆ ಬರುತ್ತಿದೆ. ಆತ ದೇವಾಲಯದಲ್ಲಿ ಎಕೆ47 ಹಿಡಿದು ಕುಳಿತ ಸಾಧುವಲ್ಲ. ಆತ ಭಯೋತ್ಪಾದಕ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next