Advertisement

Bhim Army: ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಮೇಲೆ ಗುಂಡಿನ ದಾಳಿ

09:12 PM Jun 28, 2023 | Team Udayavani |

ಲಕ್ನೋ: ಭೀಮ್‌ ಆರ್ಮಿ ಮುಖ್ಯಸ್ಥ, ಚಂದ್ರಶೇಖರ್‌ ಆಜಾದ್‌ ಅವರನ್ನು ಉತ್ತರಪ್ರದೇಶದ ಸಹರಾನ್‌ಪುರದಲ್ಲಿ ಗುಂಡುಹಾರಿಸಿ ಹತ್ಯೆಗೈಯ್ಯುವ ಪ್ರಯತ್ನ ನಡೆದಿದ್ದು, ಅದೃಷ್ಟವಶಾತ್‌ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಬಲಿಗರೊಬ್ಬರ ಮನೆಯಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಜಾದ್‌ ಸಹರಾನ್‌ಪುರಕ್ಕೆ ಆಗಮಿಸಿದ್ದರು.

Advertisement

ಕಾರ್ಯಕ್ರಮದ ಬಳಿಕ ತಮ್ಮ ಟೊಯೋಟಾ ಫಾರ್ಚೂನರ್‌ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಮಾರುತಿ ಸುಜುಕಿ, ವೈಟ್‌ ಸ್ವಿಫ್ಟ್ನಲ್ಲಿ ಬಂದಂಥ ದುಷ್ಕರ್ಮಿಗಳು ಆಜಾದ್‌ ಇದ್ದಂಥ ಕಾರಿನ ಮೇಲೆ ತೀವ್ರ ಗುಂಡಿನದಾಳಿ ನಡೆಸಿ, ಪರಾರಿಯಾಗಿದ್ದಾರೆ.ಈ ವೇಳೆ ಆಜಾದ್‌ ಅವರ ಬೆನ್ನಿಗೆ ಗುಂಡು ತಗುಲಿದೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯನ್ನು ಭೀಮ್‌ ಆರ್ಮಿ ಖಂಡಿಸಿದ್ದು, ಬಹುಜನ್‌ ಮಿಷನ್‌ ಚಳವಳಿಯನ್ನು ತಡೆಯಲು ನಡೆಸಿರುವ ಹೇಡಿಕೃತ್ಯವಿದು ಎಂದು ಕಿಡಿಕಾರಿದೆ.

Advertisement

Udayavani is now on Telegram. Click here to join our channel and stay updated with the latest news.

Next