Advertisement

ಮನೆಗೆ ಕನ್ನ ಹಾಕಿದ ಕಳ್ಳರು, ಅಪಾರ ಪ್ರಮಾಣದ ಸೊತ್ತು ಕಳವು : ಪೊಲೀಸರಿಂದ ಶೋಧ ಕಾರ್ಯ

08:23 PM Jan 23, 2022 | Team Udayavani |

ಭಟ್ಕಳ: ಮನೆಗೆ ಬೀಗ ಹಾಕಿ ಹೋಗಿದ್ದನ್ನು ಉಪಯೋಗಿಸಿಕೊಂಡ ಕಳ್ಳರು ಮನೆಯ ಮುಂಬಾಗಿಲ ಬೀಗವನ್ನು ಒಡೆದು ಒಳಕ್ಕೆ ಹೊಕ್ಕು ರೂ.95,000-00 ಬೆಲೆ ಬಾಳುವ ಚಿನ್ನ ಹಾಗೂ ರೂ.24,000-00 ನಗದು ದೋಚಿ ಪರಾರಿಯಾಗಿರುವ ಘಟನೆ ಮುರ್ಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿ ನವಾಯತ ಕಾಲೋನಿಯಲ್ಲಿ ನಡೆದಿದೆ.

Advertisement

ಶನಿವಾರ ಸಂಜೆ 4 ಗಂಟೆಯಿಂದ ರವಿವಾರ ಬೆಳಿಗ್ಗೆ 7 ಗಂಟೆಯ ನಡುವೆ ಕಳ್ಳತನ ನಡೆದಿದ್ದು ಕಳ್ಳರು ಮನೆಯೊಳಗೆ ಹೊಕ್ಕು ಮನೆಯ ಕಪಾಟಿನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದು 10 ಗ್ರಾಮ ತೂಕದ ಬಂಗಾರದ ಚೈನ್ ಹಾಗೂ ಲಾಕೆಟ್, 5 ಗ್ರಾಮ ತೂಕದ ರಿಂಗ್, 10 ಗ್ರಾಮ ತೂಕದ ಬಳೆ, 5 ಗ್ರಾಮ ತೂಕದ ಕಿವಿಯ ಓಲೆ ಒಂದು ಜೊತೆ, 32 ಇಂಚ ಟಿ.ವಿ. ಒಂದು, ಬೈಕಿನ ಆರ್.ಸಿ. ಹಾಗೂ ಬ್ಯಾಂಕ್ ಲಾಕರ್ ಕೀ, ಹಾಗೂ ನಗದು ರೂ.25,000-00 ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟೂ ಕಿಮ್ಮತ್ತು ರೂ.1,20,000-00 ಎಂದು ತಿಳಿಸಲಾಗಿದೆ.

ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಹಾಫಿಜಾ ಗುಲ್‍ಶನ ಕೋಂ ಮಹಮ್ಮದ್ ಹಾಫಿಜ್ ಹಾಜಿಕೋಲ ದೂರು ನೀಡಿದ್ದು ದೂರನ್ನು ಸ್ವೀಕರಿಸಿದ ಮುರ್ಡೇಶ್ವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು ಕಾರವಾರದಿಂದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಇದನ್ನೂ ಓದಿ : ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next