Advertisement

ಭಾತಂಬ್ರಾ ಸರಕಾರಿ ಪ್ರೌಢಶಾಲೆ ನೂತನ ಎಸ್‌ಡಿಎಂಸಿ ರಚನೆ

05:53 PM Jul 10, 2022 | Team Udayavani |

ಭಾಲ್ಕಿ: ತಾಲೂಕಿನ ಭಾತಂಬ್ರಾ ಗ್ರಾಮದ ಸರಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ನೂತನ ಅಧ್ಯಕ್ಷರಾಗಿ ಮಹಾದೇವ ಬೇಲೂರೆ ಮತ್ತು ಉಪಾಧ್ಯಕ್ಷರಾಗಿ ರಾಜಕುಮಾರ ಜಾಧವ ಆಯ್ಕೆಯಾಗಿದ್ದಾರೆ ಎಂದು ಶಾಲೆ ಮುಖ್ಯಗುರು ಚನ್ನವೀರ ಚಕ್ರಸಾಲಿ ತಿಳಿಸಿದ್ದಾರೆ.

Advertisement

ಶಾಲೆಯಲ್ಲಿ ಶನಿವಾರ ಎಸ್‌ ಡಿಎಂಸಿ ರಚನೆ ಸಭೆ ನಡೆಯಿತು. ಎಲ್ಲರ ಸಹಮತದೊಂದಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿದ ನೂತನ ಅಧ್ಯಕ್ಷ ಮಹಾದೇವ ಬೇಲೂರೆ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಶಾಲಾಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಡಲಾಗುವುದು ಎಂದರು.

ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ಎಸ್‌ಡಿಎಂಸಿ ಉಪಾಧ್ಯಕ್ಷ ರಾಜಕುಮಾರ ಜಾಧವ, ಸದಸ್ಯರಾದ ಗೋಪಿನಾಥ ಹೋಟಕರ್‌, ಶಿವಾಜಿ ವಿಶ್ವನಾಥ್‌, ಲೈಯಕ ಅಹಮದ್‌, ಜೈಸಿಂಗ್‌ ಠಾಕೂರ್‌, ಬಲಭೀಮ ವಿಶ್ವನಾಥ, ಲತಾ ಚಂದ್ರಕಾಂತ, ಅನಿತಾ ಕಾಶಿನಾಥ, ಶಿಕ್ಷಕರಾದ ಗೋಪಾಲ ಜಾದವ್‌, ಖಲೀಲ್‌ ಅಹ್ಮದ್‌, ಶಕೀಲ್‌, ಸಂಜು ಉಪಾಸೆ, ಸಂಜುಕುಮಾರ ಹೆಡಗಾಪೂರೆ, ಸೂರ್ಯಕಾಂತ ಖುಳೆ, ಶಕುಂತಲಾ ಬೆಣ್ಣೆ, ವೈಶಾಲಿ ಚಿಕಮುರ್ಗೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next