Advertisement
ಎಸ್ಪಿಪಿ ನೇಮಕ-ಹೈಕೋರ್ಟ್ ತಡೆಪ್ರಕರಣದಲ್ಲಿ ದೂರುದಾರೆ ಗುಲಾಬಿ ಶೆಡ್ತಿ ಪರ ವಿಶೇಷ ಸರಕಾರಿ ಅಭಿಯೋಜಕರನ್ನಾಗಿ (ಎಸ್ಪಿಪಿ) ಎಂ. ಶಾಂತಾರಾಮ ಶೆಟ್ಟಿ ಅವರನ್ನು ಸರಕಾರ ನೇಮಿಸಿತ್ತು. ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ಕೊಟ್ಟಿತ್ತು. ಆನಂತರ ತಡೆಯನ್ನು ತೆರವುಗೊಳಿಸಿದ್ದು, ಸರಕಾರಕ್ಕೆ ಆಕ್ಷೇಪ ಸಲ್ಲಿಸುವಂತೆ ನಿರ್ದೇಶಿಸಿತ್ತು. ಸರಕಾರವು ಶಾಂತಾರಾಮ್ ಶೆಟ್ಟಿಯವರನ್ನು ಮುಂದುವರಿಸಲು ತೀರ್ಮಾನ ಪ್ರಕಟಿಸಿತ್ತು. ಆರೋಪಿ ಪರ ವಕೀಲರು ಮತ್ತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಸರಕಾರದ ನೇಮಕ ಆದೇಶ ಮತ್ತು ಮುಂದುವರಿಸಲು ನಿರ್ಧರಿಸಿರುವುದಕ್ಕೆ ಎ. 6ರ ವರೆಗೆ ತಡೆ ನೀಡಿದೆ. ರಾಜೇಶ್ವರಿಯವರ ಪರ ಹೈಕೋರ್ಟ್ ವಕೀಲ ಅರುಣ್ ಶ್ಯಾಮ್ ಅರ್ಜಿ ಸಲ್ಲಿಸಿದ್ದರು.
ಆರೋಪಿ ನಂದಳಿಕೆ ನಿರಂಜನ ಭಟ್ ಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಲ್ಲಿ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿಯ ವಿಚಾರಣೆ ಮಂಗಳ ವಾರ ನಡೆಯಿತು. ಎಸ್ಪಿಪಿ ಶಾಂತಾರಾಮ್ ಶೆಟ್ಟಿಯವರು ಜಾಮೀನು ಕೊಡಬಾರ ದೆಂದು ವಾದಿಸಿದರು. ಮಾ. 28ಕ್ಕೆ ವಿಚಾರಣೆ ಮುಂದೂಡಲಾಯಿತು.