Advertisement

ಭಾಸ್ಕರ ಶೆಟ್ಟಿ ಪ್ರಕರಣ: ಸಾಕ್ಷಿಗಳಿಗೆ ಬೆದರಿಕೆ

09:57 AM Aug 17, 2018 | |

ಉಡುಪಿ: ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಗುರುವಾರ ಸಾಕ್ಷಿಧಾರರಿಗೆ ವ್ಯಕ್ತಿ ಯೋರ್ವ ಬೆದರಿಕೆ ಹಾಕಿದ್ದಾನೆ.

Advertisement

ಸಾಕ್ಷಿಧಾರರಾದ ಅರುಣ್‌ ಮತ್ತು ಸತೀಶ್‌  ಸಾಕ್ಷಿ ಹೇಳಿ ಹೊರಬಂದು ಹೊಟೇಲ್‌ನಲ್ಲಿದ್ದಾಗ ಅರುಣ್‌ ಅವರ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿ ಹಿಂದಿಯಲ್ಲಿ ಮಾತನಾಡಿ, “ಸಾಕ್ಷಿ ಹೇಳಿದರೆ ತಾಯಿಯನ್ನು ಕೊಲ್ಲುತ್ತೇನೆ’ ಎಂದು ಬೆದರಿಕೆ ಒಡ್ಡಿದ್ದಾನೆ. 

ಈ ಬಗ್ಗೆ ಅರುಣ್‌  ನ್ಯಾಯಾಲಯಕ್ಕೆ ತಿಳಿಸಿ ರಕ್ಷಣೆ ಒದಗಿಸುವಂತೆ ಕೋರಿದರು. ಮನವಿ ಪುರಸ್ಕರಿಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ವೆಂಕಟೇಶ ನಾಯ್ಕ ಅವರು ಅರುಣ್‌ ಮತ್ತು ಸತೀಶ್‌ ಅವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಪೊಲೀಸರಿಗೆ ಆದೇಶಿಸಿದರು. ಅದರಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಸಾಕ್ಷಿಧಾರರ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next