Advertisement

ಭಾರತೀಪುರ ಕ್ರಾಸ್‌ ಕಿರುಚಿತ್ರ ಬಿಡುಗಡೆ

11:23 AM Jan 27, 2018 | |

ನಟ ಸುದೀಪ್‌ ದನಿ ನೀಡಿರುವ, ಅನೂಪ್‌ ಸೀಳಿನ್‌ರ ಸಂಗೀತ ನಿರ್ದೇಶನವಿರುವ ಕಿರುಚಿತ್ರವೊಂದರ ಬಿಡುಗಡೆ ಕಾರ್ಯಕ್ರಮ ಆಯೋಜನೆಗೊಂಡಿದೆ. “ಭಾರತಿಪುರ ಕ್ರಾಸ್‌’ ಎಂಬ ಹೆಸರಿನ ಈ ಕಿರುಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದೇ ಅಲ್ಲದೆ ನಿರ್ದೇಶನವನ್ನೂ ಮಾಡಿರುವವರು ಪತ್ರಕರ್ತ ವಿಜಯ್‌ ಭರಮಸಾಗರ.

Advertisement

ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರು ಕಿರುಚಿತ್ರವನ್ನು ಇಂಟರ್‌ನೆಟ್‌ನಲ್ಲಿ ಬಿಡುಗಡೆಗೊಳಿಸುತ್ತಿದ್ದಾರೆ. ಆನಂತರ ಯೂಟ್ಯೂಬಿನಲ್ಲಿ ಯಾರು ಬೇಕಾದರೂ ಈ ಕಿರುಚಿತ್ರವನ್ನು ವೀಕ್ಷಿಸಬಹುದಾಗಿದೆ. ತಾಳ್ಮೆ ಮತ್ತು ಪಶ್ಚಾತ್ತಾಪದ ಕಥೆಯನ್ನು ರೋಚಕ ಸನ್ನಿವೇಶಗಳೊಂದಿಗೆ ನಿರ್ದೇಶಕರು ಹೇಳಹೊರಟಿದ್ದಾರೆ. ಲಿಖೀತ್‌ ಸೂರ್ಯ ಮತ್ತು ಪೂಜಾ ಹುಣಸೂರು ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಎಲ್ಲಿ?: ಎಸ್‌.ಆರ್‌.ವಿ ಥಿಯೇಟರ್‌, ಮಲ್ಲೇಶ್ವರಂ
ಯಾವಾಗ?: ಜನವರಿ 29, ಸಂಜೆ 5

Advertisement

Udayavani is now on Telegram. Click here to join our channel and stay updated with the latest news.

Next