Advertisement

2,250 ಕೋಟಿ ರೂ. ಅನುದಾನದಿಂದ ಸಮಗ್ರ ಅಭಿವೃದ್ಧಿ: ಡಾ|ಭರತ್‌ ವೈ. ಶೆಟ್ಟಿ

12:42 AM Apr 26, 2023 | Team Udayavani |

ಸುರತ್ಕಲ್‌: ಮೂರು ವರ್ಷ ಪ್ರಾಕೃತಿಕ ವಿಕೋಪ, ನೆರೆ, ಕೊರೊನಾ ಹಾವಳಿಯ ನಡುವೆಯೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ 2,250 ಕೋಟಿ ರೂ. ಅನುದಾನ ತರುವಲ್ಲಿ ಸಫಲನಾಗಿದ್ದೇನೆ ಎಂದು ಶಾಸಕ ಡಾ| ಭರತ್‌ ಶೆಟ್ಟಿ ವೈ. ಹೇಳಿದ್ದಾರೆ.

Advertisement

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತ ಪ್ರಗತಿ ಪಥ ಕೈಪಿಡಿಯನ್ನು ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.

ಶಾಶ್ವತ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕ್ಷೇತ್ರದಾದ್ಯಂತ ಸಮರೋಪಾದಿಯಾಗಿ ಆಗಿದೆ. ಜಲಜೀವನ್‌, ಜಲಸಿರಿ ಕುಡಿ ಯುವ ನೀರು, ಬೀಚ್‌ ಟೂರಿಸಂ, ಪಾರ್ಕ್‌ ಅಭಿವೃದ್ಧಿ, ಚರಂಡಿ ಯೋಜನೆ, ಕೆರೆಗಳ ಅಭಿವೃದ್ಧಿ, ತ್ಯಾಜ್ಯ ಸಂಸ್ಕರಣೆ ಘಟಕ, ಐತಿಹಾಸಿಕ ಇತಿಹಾಸ ಸಾರುವ ಪ್ರಮುಖ ಜಂಕ್ಷನ್‌ಗಳ ಅಭಿವೃದ್ಧಿ ಇತ್ಯಾದಿಗೆ ಆದ್ಯತೆ ನೀಡಿದ್ದೇನೆ. ಮುಡಾ, ಸ್ಮಾರ್ಟ್‌ ಸಿಟಿ ಅನುದಾನವನ್ನೂ ಇದಕ್ಕಾಗಿ ಬಳಸಿಕೊಂಡು ಕೆರೆ, ಪಾರ್ಕ್‌ ಅಭಿವೃದ್ಧಿ ಮಾಡಲಾಗಿದೆ, ಕ್ಷೇತ್ರದ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಗೊಳಿಸಲಾಗಿರುತ್ತದೆ ಎಂದರು.

ರಾಜ್ಯದ ಪ್ರಪ್ರಥಮ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣ, ರಾಜ್ಯದ 2ನೇ ಒಣತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, 6,500 ಕುಟುಂಬಕ್ಕೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ ಎಂದರು.
ಕಾವೂರು ಕೆರೆಯನ್ನು ಪುನರುಜ್ಜೀವನ ಗೊಳಿಸಿ ಪ್ರವಾಸಿ ಆಕರ್ಷಣೆಯ ತಾಣ ವನ್ನಾಗಿ ಮಾಡಲಾಗಿದೆ ಎಂದರು.

ಅಕ್ರಮ ಕಸಾಯಿಖಾನೆ ಮುಟ್ಟುಗೋಲು
3 ಅಕ್ರಮ ಕಸಾಯಿಖಾನೆಗಳನ್ನು ಮುಟ್ಟುಗೋಲು ಹಾಕಿದ ಬಳಿಕ ಅಕ್ರಮ ಹತ್ಯೆಗಳ ಸರಮಾಲೆಯನ್ನು ನಿಲ್ಲಿಸಲಾಗಿದೆ ಎಂದರು. ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ತಿಲಕ್‌ ರಾಜ್‌ ಕೃಷ್ಣಾಪುರ, ಶರತcಂದ್ರ ಶೆಟ್ಟಿ, ಸಂದೀಪ್‌ ಪಚ್ಚನಾಡಿ, ರಾಜೇಶ್‌ ಕೊಟ್ಟಾರಿ, ಕೃಷ್ಣ ಶೆಟ್ಟಿ ಕಡಬ ಮತ್ತಿತರರು ಉಪಸ್ಥಿತರಿದ್ದರು.

Advertisement

ಗೋ ಹತ್ಯೆಗೆ ಕಡಿವಾಣ
ಬಿಜೆಪಿಯ ಬೃಹತ್‌ ರೋಡ್‌ ಶೋ ಉದ್ಘಾಟಿಸಿ ಮಾತನಾಡಿದ, ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಯುವಶಕ್ತಿಯ ಪ್ರತೀಕ ಡಾ| ಭರತ್‌ಶೆಟ್ಟಿ. ಅವರು ಇಲ್ಲಿನ ಶಾಸಕರಾದ ಬಳಿಕ ಕೋಮು ವೈಷಮ್ಯ, ಅಪರಾಧಿಗಳ ಆಸ್ತಿ ಮುಟ್ಟುಗೋಲು ಮಾಡಿದ ಬಳಿಕ ಗೋ ಹತ್ಯೆ ನಿಂತಿದೆ. ದ.ಕ. ಜಿಲ್ಲೆಯಲ್ಲಿಯೇ ಭರತ್‌ ಶೆಟ್ಟಿ ಗರಿಷ್ಠ ಮತಗಳಿಂದ ಗೆಲ್ಲುತ್ತಾರೆ ಎಂದರು. ವೇದಿಕೆಯಲ್ಲಿ ಶಾಸಕರಾದ ಡಾ| ಭರತ್‌ ಶೆಟ್ಟಿ ವೈ, ರಾಮಚಂದ್ರ ಬೈಕಂಪಾಡಿ, ಮೇಯರ್‌ ಜಯಾನಂದ ಅಂಚನ್‌, ಬಿಜೆಪಿ ಮುಖಂಡರು, ಮನಪಾ ಸದಸ್ಯರು ಉಪಸ್ಥಿತರಿದ್ದರು.

ಸರೋಜಿನಿ ಮಹಿಷಿ ವರದಿ ಜಾರಿಗೆ ಯತ್ನ
ಸರೋಜಿನಿ ಮಹಿಷಿ ವರದಿ ಜಾರಿಗೆ ಈಗಾಗಲೇ ಆಗ್ರಹಿಸಲಾಗಿದ್ದು, ಸಚಿವ ಸುನಿಲ್‌ ಕುಮಾರ್‌ ಈ ಆದೇಶ ಜಾರಿಗೆ ಈ ಹಿಂದೆಯೇ ಸಂಬಂಧಪಟ್ಟ ಡಿಸಿಗಳಿಗೆ ಸೂಚಿಸಿದ್ದಾರೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಹೆಚ್ಚಲಿದೆ. ಉನ್ನತ ಶಿಕ್ಷಣ ಪಡೆದವರಿಗೆ ಐಐಟಿ, ಐಎಎಸ್‌ ಮತ್ತಿತರ ಸಮಗ್ರ ಕೋಚಿಂಗ್‌ ತರಬೇತಿ ಯೋಜನೆ, 10 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್‌, ಹಿಂದೂ ಭವನ ನಿರ್ಮಾಣ, ಯಾತ್ರಿ ನಿವಾಸ, ಸಾರ್ವಜನಿಕರಿಗೆ ಸಿಂಗಲ್‌ ವಿಂಡೋ ಸರಕಾರಿ ದಾಖಲೆ ಪತ್ರ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆಗೆ ಅತ್ಯಾಧುನಿಕ ಸಂಸ್ಕರಣ ಘಟಕ ನಿರ್ಮಿಸುವ ಗುರಿಯಿದೆ ಎಂದು ಎಂದು ಡಾ| ಭರತ್‌ ಶೆಟ್ಟಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next