Advertisement

ಹದಿನೆಂಟರಂದು ಅನಾವರಣಗೊಳ್ಳಲಿದೆ ದೃಶ್ಯವೈಭವದ ಭರಾಟೆ!

11:10 AM Oct 17, 2019 | Naveen |

ರೋರಿಂಗ್ ಸ್ಟಾರ್ ಶ್ರೀ ಮುರುಳಿ ನಟಿಸಿರೋ ಭರಾಟೆ ಈ ವಾರ ಅಂದರೆ ಹದಿನೆಂಟನೇ ತಾರೀಕಿನಂದು ತೆರೆಗಾಣಲಿದೆ. ಮುಹೂರ್ತ ಕಂಡ ದಿನದಿಂದ, ಚಿತ್ರೀಕರಣ ಶುರುವಾದಂದಿನಿಂದಲೇ ಈ ಚಿತ್ರ ಪಡೆದುಕೊಂಡಿದ್ದ ಪ್ರಚಾರದ ಭರಾಟೆ ಸಣ್ಣ ಮಟ್ಟದ್ದಲ್ಲ. ಬರ ಬರುತ್ತಾ ಇದರ ಸ್ಟಿಲ್ಲುಗಳು, ಟ್ರೇಲರ್ ಮೂಲಕ ದೃಶ್ಯ ವೈಭವದ ಝಲಕ್ಕುಗಳು ಕೂಡಾ ಅನೂಚಾನವಾಗಿಯೇ ಅನಾವರಣಗೊಳ್ಳುತ್ತಾ ಬಂದಿವೆ. ಹೀಗೆ ರಿಚ್‌ನೆಸ್ ಕಾರಣದಿಂದ ಭರಾಟೆ ಸದ್ದು ಮಾಡುತ್ತಿದ್ದರೆ ಅದರ ಕ್ರೆಡಿಟ್ಟು ಛಾಯಾಗ್ರಾಹಕರಾದ ಭುವನ್ ಗೌಡ ಅವರಿಗೇ ಸಲ್ಲಬೇಕು.

Advertisement

ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಪಡೆದುಕೊಂಡಿದ್ದ ಸ್ಟಿಲ್ ಫೋಟೋಗ್ರಾಫರ್ ಆಗಿದ್ದವರು ಭುವನ್ ಗೌಡ. ಸ್ವರ್ಗದಿಂದ ಸೀದಾ ಬಂದು ಕಣ್ಣೆದುರು ನಿಂತಂಥಾ ಫ್ರೆಶ್‌ನೆಸ್ ಹೊಂದಿರೋ ಫೋಟೋಗಳನ್ನು ಕ್ಲಿಕ್ಕಿಸೋದರಲ್ಲಿ ಭುವನ್ ಗೌಡ ಮಾಸ್ಟರ್ ಪೀಸ್. ಇವರಿಂದ ಫೋಟೋ ತೆಗೆಸಿಕೊಳ್ಳಲು ಪೈಪೋಟಿಯೇ ನಡೆಯುತ್ತಿತ್ತು. ಹೀಗಿರುವಾಗಲೇ ಸಿನಿಮಾ ಛಾಯಾಗ್ರಾಹಕರಾಗಿ ಎಂಟ್ರಿ ಕೊಟ್ಟಿರೋ ಭುವನ್ ಗೌಡ ಕೆಜಿಎಫ್ ಚಿತ್ರದಿಂದ ದೇಶಾದ್ಯಂತ ಗಮನ ಸೆಳೆದಿದ್ದಾರೆ. ಅವರೇ ಭರಾಟೆಗೂ ಛಾಯಾಗ್ರಹಣ ಮಾಡಿದ್ದರೆಂದ ಮೇಲೆ ಅದು ವಿಭಿನ್ನವಾಗಿಯೇ ಮೂಡಿ ಬಂದಿರುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ. ಅದು ಈಗಾಗಲೇ ಟ್ರೇಲರ್ ಮೂಲಕ ಋಜುವಾತಾಗಿದೆ.

ಸ್ಟಿಲ್ ಫೋಟೋಗ್ರಫಿ ಮಾಡುತ್ತಿದ್ದ ಕಾಲದಲ್ಲಿಯೂ ಭುವನ್ ಗೌಡ ಕ್ರಿಯಾಶೀಲತೆಗೆ ಹೆಸರಾಗಿದ್ದವರು. ಅವರು ಛಾಯಾಗ್ರಾಹಕರಾಗಿ ಗೆದ್ದಿದ್ದರ ಹಿಂದೆಯೂ ಅಂಥಾದ್ದೇ ಶ್ರದ್ಧೆ ಬೆರೆತ ಕ್ರಿಯಾಶೀಲತೆಯೇ ಪ್ರಧಾನ ಪಾತ್ರ ವಹಿಸಿದೆ. ಭಯರಾಟೆ ಚಿತ್ರ ಈ ಕಾರಣದಿಂದಲೇ ಅತ್ಯಂತ ಅದ್ದೂರಿಯಾಗಿ ಮೂಡಿ ಬಂದಿದೆ. ಚೇತನ್ ಕುಮಾರ್ ಅವರಂಥಾ ಕನಸುಗಾರ ನಿರ್ದೇಶಕ, ಸಿನಿಮಾ ಚೆಂದಗಾಣಲು ಕಾಸು ಹೂಡೋದಕ್ಕೆ ಹಿಂದೆ ಮುಂದೆ ನೋಡದ ನಿರ್ಮಾಪಕ ಸುಪ್ರೀತ್ ಮತ್ತು ಭುವನ್ ಗೌಡರ ಸಮಾಗಮವಾದರೆ ಅಲ್ಲಿ ಭರಾಟೆಯಂಥಾ ದೃಶ್ಯ ಕಾವ್ಯವೊಂದು ಸಿದ್ಧಗೊಳ್ಳದಿರಲು ಸಾಧ್ಯವೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next