Advertisement

ಭರತ-ಬಾಹುಬಲಿ ವೈಭವ

10:21 AM Jan 11, 2020 | mahesh |

“ಶ್ರೀ ಭರತ-ಬಾಹುಬಲಿ’- ಹೀಗೊಂದು ಸಿನಿಮಾ ಬಗ್ಗೆ ನೀವು ಕೇಳಿರಬಹುದು. ಈ ಚಿತ್ರದ ಹೆಸರು ಅನೇಕ ದಿನಗಳಿಂದ ಓಡಾಡುತ್ತಿದ್ದರೂ, ಆ ಸಿನಿಮಾ ಯಾವಾಗ ಬಿಡುಗಡೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ, ಈಗ ಚಿತ್ರತಂಡ ಎಲ್ಲಾ ಪಕ್ಕಾ ಮಾಡಿಕೊಂಡಿದೆ. ಮಂಜು ಮಾಂಡವ್ಯ ನಿರ್ದೇಶಿಸಿ, ನಾಯಕರಾಗಿ ನಟಿಸಿರುವ “ಶ್ರೀ ಭರತ-ಬಾಹುಬಲಿ’ ಚಿತ್ರ ಜನವರಿ 17 ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಚಿತ್ರದ ಹಾಡು ಹಾಗೂ ಟ್ರೇಲರ್‌ ಅನ್ನು ಮಾಧ್ಯಮದ ಮುಂದೆ ಪ್ರದರ್ಶಿಸಲಾಯಿತು. ನಟ ಯಶ್‌ ಟ್ರೇಲರ್‌ ರಿಲೀಸ್‌ ಮಾಡಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ.

Advertisement

ಅಂದಹಾಗೆ, ಮಂಜು ಮಾಂಡವ್ಯ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. “ಮಾಸ್ಟರ್‌ ಪೀಸ್‌’ ಚಿತ್ರದ ನಂತರ ಅನೇಕ ನಿರ್ಮಾಪಕರು ಬಂದರೂ, ಯಾರೊಬ್ಬರಲ್ಲೂ ನಿಜವಾದ ಸಿನಿಮಾ ಪ್ರೀತಿ ಕಾಣದ ಕಾರಣ, ಸಿನಿಮಾದಿಂದ ದೂರ ಉಳಿದಿದ್ದ ಮಂಜು, ಆ ಗ್ಯಾಪ್‌ನಲ್ಲಿ ಈ ಕಥೆ ಮಾಡಿಕೊಂಡರಂತೆ. ಕಥೆಗೆ ತಾನೇ ಹೀರೋ ಆಗಲು ನಿರ್ಧರಿಸಿ, ಅದಕ್ಕೆ ಬೇಕಾದ ತಯಾರಿ ಕೂಡಾ ಮಾಡಿಕೊಂಡರಂತೆ. ಚಿತ್ರದಲ್ಲಿ ಚಿಕ್ಕಣ್ಣ ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ. ಮಂಜು ಭರತನಾದರೆ, ಚಿಕ್ಕಣ್ಣ ಬಾಹುಬಲಿ! ಈ ಚಿತ್ರವನ್ನು ಐಶ್ವರ್ಯಾ ಫಿಲಂಸ್‌ ಬ್ಯಾನರ್‌ನಡಿ ಶಿವಪ್ರಕಾಶ್‌ ನಿರ್ಮಿಸಿದ್ದಾರೆ. ಆರು ಕೋಟಿ ರೂಪಾಯಿ ಖರ್ಚು ಮಾಡಿ ಈ ಸಿನಿಮಾ ನಿರ್ಮಿಸಿರುವ ಅವರು, ಈ ಸಿನಿಮಾ ಪ್ರಚಾರಕ್ಕಾಗಿ ಒಂದು ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಅಂದಹಾಗೆ, “ಶ್ರೀ ಭರತ ಬಾಹುಬಲಿ’ ಚಿತ್ರ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌’ ಸಿನಿಮಾವಾಗಿದ್ದು, ಎಲ್ಲಾ ವರ್ಗದವರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು.

ಚಿತ್ರದಲ್ಲಿ ಸಾರಾ ಹರೀಶ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತನ್ನ ಮೂಲ ಹುಡುಕಿಕೊಂಡು ವಿದೇಶದಿಂದ ಬರುವ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಸಾರಾ ಮಾತನಾಡುವ ಇಂಗ್ಲೀಷ್‌ಗೆ ಫಿದಾ ಆಗಿ ಆಕೆಯನ್ನು ಆಯ್ಕೆ ಮಾಡಲಾಯಿತಂತೆ. ಉಳಿದಂತೆ ಶ್ರೇಯಾ ಶೆಟ್ಟಿ, ಅಮೃತಾ, ಶ್ರೀನಿವಾಸ ಮೂರ್ತಿ,ಕರಿಸುಬ್ಬು ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಸಂಗೀತ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next