Advertisement

BJP ಮತಗಳನ್ನು ಉಳಿಸಲು ಅಡ್ವಾಣಿಯವರಿಗೆ ಭಾರತ ರತ್ನ: ಅಖಿಲೇಶ್ ಯಾದವ್

02:40 PM Feb 03, 2024 | Team Udayavani |

ಲಕ್ನೋ: ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಬಿಜೆಪಿಯ ಮತಗಳನ್ನು ಉಳಿಸಲು ನೀಡುತ್ತಿದ್ದಾರೆ ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.

Advertisement

ಠಾಕ್ರೆ ಮತ್ತು ಸಾವರ್ಕರ್ ಅವರಿಗೆ ಯಾವಾಗ?

ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿರುವುದನ್ನು ಸ್ವಾಗತಿಸಿದ ಶಿವಸೇನೆ ಉದ್ಧವ್ ಠಾಕ್ರೆ ಬಣ ಬಾಳ್ ಠಾಕ್ರೆ ಮತ್ತು ವೀರ ಸಾವರ್ಕರ್ ಅವರಿಗೆ ಯಾವಾಗ ಸಿಗುತ್ತದೆ ಎಂದು ಪ್ರಶ್ನಿಸಿದೆ.

ಶಿವಸೇನೆ (ಯುಬಿಟಿ) ನಾಯಕ ಆನಂದ್ ದುಬೆ ಮಾತನಾಡಿ “ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುತ್ತಿರುವುದು ತುಂಬಾ ಸಂತೋಷದ ವಿಷಯ, ಅವರು ಯಾವಾಗಲೂ ವಿನಮ್ರತೆಯ ರಾಜಕಾರಣ ಮಾಡಿದರು ಮತ್ತು ಎಲ್ಲರನ್ನೂ ಒಟ್ಟಿಗೆ ಕರೆತರಲು ಪ್ರಯತ್ನಿಸಿದರು. ಹಿಂದೂ ಧರ್ಮದ ಧ್ವಜವನ್ನು ಬಲಪಡಿಸಿದರು ಎಂದರು.

ವೀರ್ ಸಾವರ್ಕರ್ ಮತ್ತು ಬಾಳಾಸಾಹೇಬ್ ಠಾಕ್ರೆ ಅವರಿಗೆ ಭಾರತ ರತ್ನ ಯಾವಾಗ ನೀಡಲಾಗುತ್ತದೆ?ಇಬ್ಬರೂ ಮಹಾನ್ ವ್ಯಕ್ತಿಗಳಿಗೆ ಭಾರತ ರತ್ನ ನೀಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ ಆದರೆ ಸರಕಾರವು ಭಾರತ ರತ್ನ ನೀಡಿಲ್ಲ. ಅವರು ಚುನಾವಣೆ ಸಮಯದಲ್ಲಿ ಮಾತ್ರ ಅವರ ಬಗ್ಗೆ ಏಕೆ ಯೋಚಿಸುತ್ತಾರೆ?ನಮಗೆ ಬೇರೆ ಉದ್ದೇಶವಿಲ್ಲ” ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next