Advertisement

ಭಾರತ್ ಜೋಡೋ ನಿಗದಿಯಂತೆ ಮುಂದುವರಿಯಲಿದೆ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

09:52 PM Oct 10, 2022 | Team Udayavani |

ಚಿತ್ರದುರ್ಗ : ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಭಾರತ್ ಜೋಡೋ ಯಾತ್ರೆ ನಿಗದಿ ಆಗಿರುವಂತೆ ಮುಂದುವರಿಯಲಿದೆ, ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.  ಶಿವಕುಮಾರ್ ತಿಳಿಸಿದ್ದಾರೆ.

Advertisement

ರಾಹುಲ್ ಗಾಂಧಿ ಅವರು ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನಾಳೆ ಯಾತ್ರೆ ಸ್ಥಗಿತಗೊಳಿಸಿ ತೆರಳಲಿದ್ದಾರೆ ಎಂಬುದು ಕೇವಲ ವದಂತಿ. ಅವರು ಇಲ್ಲೇ ಇದ್ದು ಯಾತ್ರೆ ಮುಂದುವರಿಸುವರು ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಹೊಸ ಕೆಲಸವನ್ನು ಬಿಟ್ಟು ಭಾರತ್ ಜೋಡೋ ಗೆ ಬಂದ ಎಂಜಿನಿಯರಿಂಗ್ ಪದವೀಧರೆ

ರಾಜ್ಯದಲ್ಲಿ 12 ನೇ ದಿನದ ಯಾತ್ರೆ ಮಂಗಳವಾರ ಹಿರಿಯೂರಿನ ಹರ್ತಿಕೋಟೆ ಗ್ರಾಮದಿಂದ ಚಿತ್ರದುರ್ಗದಿಂದ ಸಿದ್ದಾಪುರದ ವರೆಗೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next