Advertisement

ಭಾರತ್‌ ಬ್ಯಾಂಕ್‌ಗೆ ಸರ್ವೋತ್ಕೃಷ್ಟ ಬ್ಯಾಂಕ್‌ ಗೌರವ

01:23 PM Sep 28, 2017 | Team Udayavani |

ಮುಂಬಯಿ: ಬೃಹನ್ಮುಂಬಯಿ ನಗರಿ ಸಹಕಾರಿ ಬ್ಯಾಂಕ್ಸ್‌ ಅಸೋಸಿಯೇಶನ್‌ ಲಿಮಿಟೆಡ್‌ ಸಂಸ್ಥೆ ವಾರ್ಷಿಕವಾಗಿ ಕೊಡಮಾಡುವ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ “ಸರ್ವೋತ್ಕೃಷ್ಟ  ಬ್ಯಾಂಕ್‌ ಪುರಸ್ಕಾರ’ ತುಳು-ಕನ್ನಡಿಗರ ಪ್ರತಿಷ್ಠಿತ ಹಣಕಾಸು ಸಂಸ್ಥೆ  ಭಾರತ್‌ ಕೋ ಅಪರೇಟಿವ್‌ ಬ್ಯಾಂಕ್‌ಗೆ ಸಂಸ್ಥೆಗೆ ಪ್ರದಾನಿಸಿ ಗೌರವಿಸಿತು.

Advertisement

ಸೆ. 27ರಂದು  ದಾದರ್‌  ಪೂರ್ವದ ಹೊಟೇಲ್‌ ಸಿಟಿ ಪಾಯಿಂಟ್‌ ಸಭಾಗೃಹದಲ್ಲಿ ಆಯೋಜಿಸಿದ್ದ ಅಸೋಸಿಯೇಶನ್‌ನ  ಮೂವತ್ತೂಂದನೇ ವಾರ್ಷಿಕ ಸಮಾರಂಭದಲ್ಲಿ ಬ್ಯಾಂಕ್ಸ್‌ ಅಸೋಸಿಯೇಶನ್‌ನ
ಅಧ್ಯಕ್ಷ ದತ್ತರಾಮ ಚಾಳ್ಕೆ, ಉಪಾಧ್ಯಕ್ಷ ದಿನಕರ್‌ ರಾವ್‌ ಖಂಡಾಗಳೆ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸಿ. ಬಿ. ಅಡೂಲ್‌ ಹಾಗೂ ಇತರ ಪದಾಧಿಕಾರಿಗಳನ್ನು ಒಳಗೊಂಡು ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ, ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್‌, ಸಿಇಒ ಮತ್ತು ಆಡಳಿತ ನಿರ್ದೇಶಕ  ಸಿ. ಆರ್‌. ಮೂಲ್ಕಿ ಅವರಿಗೆ “ಸರ್ವೋತ್ಕೃಷ್ಟ ಬ್ಯಾಂಕ್‌’ ಪುರಸ್ಕಾರವನ್ನು ಪ್ರದಾನಿಸಿ ಅಭಿನಂದಿಸಿದರು.

ಸಾರ್ವತ್ರಿಕವಾಗಿ ಸ್ಪಂದಿಸುತ್ತಾ ಅಸಾಧಾರಣ ಸೇವೆ, ಗುಣಮಟ್ಟದ ಕಾರ್ಯವೈಖರಿಯೊಂದಿಗೆ ಸಹಕಾರಿ ಕ್ಷೇತ್ರದ ಪ್ರತಿಷ್ಠಿತ ಪಥಸಂಸ್ಥೆಯಾಗಿ ಗುರುತಿಸಿ 
ಕೊಂಡಿರುವ ಭಾರತ್‌ ಬ್ಯಾಂಕ್‌ನ 2015-2016ನೇ ಸಾಲಿನ  ಹಣಕಾಸು ವರ್ಷದಲ್ಲಿ  2,001 ಕೋ. ರೂ. ಗಳ ಮೊತ್ತಕ್ಕಿಂತ ಅಧಿಕ ಠೇವಣಿ ವ್ಯವಹಾರ ನಡೆಸಿದ ಭಾರತ್‌ ಬ್ಯಾಂಕ್‌ ಈ ಬಾರಿಯೂ ಮತ್ತೆ “ಉತ್ಕೃಷ್ಟ ಬ್ಯಾಂಕ್‌ ಪುರಸ್ಕಾರ’ಕ್ಕೆ ಪಾತ್ರವಾಗಿದೆ.

ಕಾರ್ಯಕ್ರಮದಲ್ಲಿ ಸಂಚಾಲಕರಾದ ಕಿಶೋರ್‌ ರಂಗೆ¡àಕರ್‌, ಪುರುಷೋತ್ತಮ ಮಾನೆ, ಗುಲಾಬ್‌ರಾವ್‌ ಜಗ್‌ತಾಪ್‌, ನಾಗೇಶ್‌ ಫೂವಾRರ್‌, ಗಣೇಶ್‌ ಮಹಾಳೆ, ಭಾರತ್‌ ಬ್ಯಾಂಕ್‌ನ ನಿರ್ದೇಶಕರಾದ ಪುಷ್ಪಲತಾ ಎನ್‌. ಸಾಲ್ಯಾನ್‌, ಯು. ಎಸ್‌ ಪೂಜಾರಿ, ನ್ಯಾಯವಾದಿ ಎಸ್‌. ಬಿ. ಅಮೀನ್‌, ಚಂದ್ರಶೇಖರ ಎಸ್‌. ಪೂಜಾರಿ, ಕೆ. ಬಿ. ಪೂಜಾರಿ, ಗಂಗಾಧರ್‌ ಜೆ. ಪೂಜಾರಿ, ಅಶೋಕ್‌ ಎಂ. ಕೋಟ್ಯಾನ್‌, ಬ್ಯಾಂಕ್‌ನ ಪ್ರಧಾನ ಪ್ರಬಂಧಕರಾದ ವಿದ್ಯಾನಂದ ಎಸ್‌. ಕರ್ಕೇರ, ನವೀನ್‌ಚಂದ್ರ ಎಸ್‌. ಬಂಗೇರ, ಉಪ ಪ್ರಧಾನ ವ್ಯವಸ್ಥಾಪಕರಾದ ಮೋಹನ್‌ದಾಸ್‌ ಹೆಜ್ಮಾಡಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. 

  ಚಿತ್ರ -ವರದಿ: ರೋನ್ಸ್‌  ಬಂಟ್ವಾಳ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next