Advertisement

ಭಾರತ್‌ ಬ್ಯಾಂಕ್‌ ಕಾಂಜೂರ್‌ಮಾರ್ಗ ಶಾಖೆ: 43ನೇ ಸಂಸ್ಥಾಪನ ದಿನಾಚರಣೆ

02:32 PM Sep 04, 2021 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಸಂಚಾಲಿತ ಭಾರತ್‌ ಕೋ-ಆಪರೇಟಿವ್‌ ಬ್ಯಾಂಕ್‌ನ ಕಾಂಜೂರ್‌ಮಾರ್ಗ ಶಾಖೆಯಲ್ಲಿ ಬ್ಯಾಂಕ್‌ನ 43 ನೇ ಸಂಸ್ಥಾಪನ ದಿನಾಚರಣೆ ಆ. 21ರಂದು ನಡೆಯಿತು. ಪ್ರಾರಂಭದಲ್ಲಿ ಭಾರತ್‌ ಬ್ಯಾಂಕ್‌ ಕಾಂಜೂರ್‌ಮಾರ್ಗ ಶಾಖೆಯ ಮ್ಯಾನೇಜರ್‌ ಆರತಿ ಡಿ. ಕೋಟ್ಯಾನ್‌ ಅವರು ಬ್ರಹ್ಮಶ್ರೀ ನಾರಾಯಣಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.

Advertisement

ಬಳಿಕ ಸ್ಥಳೀಯ ಉದ್ಯಮಿಗಳಾದ ರವೀಂದ್ರ ಎ. ಶೆಟ್ಟಿ, ಸಾಧು ಎಂ. ಶೆಟ್ಟಿ, ವಿನೋದ್‌ ನಾಯಕ್‌ ಅವರು ಕೇಕ್‌ ಕತ್ತರಿಸಿ ಸಂಸ್ಥಾಪನ ದಿನಾಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಖೆಯ ಅಸಿಸ್ಟೆಂಟ್‌ ಮ್ಯಾನೇಜರ್‌ ಸುರೇಶ್‌ ಜಿ. ಪೂಜಾರಿ, ಶಾಖೆಯ ಇತರ ಸಿಬಂದಿ ಸಿಂಧುರಾ ಶೆಟ್ಟಿ, ಅನುಷಾ ಜೆ. ಪೂಜಾರಿ ವಿಕ್ರೋಲಿ, ಗೀತಾಂಜಲಿ ಬನ್ನಂಜೆ, ಸುಕ್ಯಾತ್‌ ಕುಮಾರ್‌, ಪವಿತ್ರಾ ಜೆ. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಅತಿಥಿ-ಗಣ್ಯರು ಭಾರತ್‌ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ ಶುಭ ಹಾರೈಸಿದರು.

ಇದನ್ನೂ ಓದಿ:ಅಭಿಮಾನಿಗಳಿಂದ ಒತ್ತಾಯ ಬಂದರೆ ಅಭಿಷೇಕ್ ರಾಜಕೀಯ ಪ್ರವೇಶದ ಬಗ್ಗೆ ನೊಡೋಣ: ಸುಮಲತಾ

Advertisement

Udayavani is now on Telegram. Click here to join our channel and stay updated with the latest news.

Next