Advertisement

ಭಾರತ್‌ ಬ್ಯಾಂಕ್‌ ಧಾರಾವಿ-ಸಯಾನ್‌ ಶಾಖೆ: ಸಂಸ್ಥಾಪನ ದಿನಾಚರಣೆ

02:25 PM Aug 29, 2021 | Team Udayavani |

ಸಯಾನ್‌: ಬಿಲ್ಲವರ ಅಸೋಸಿಯೇಶನ್‌ ಸಂಚಾಲಿತ ಭಾರತ್‌ ಬ್ಯಾಂಕ್‌ನ 43ನೇ ಸಂಸ್ಥಾಪನ ದಿನವನ್ನು ಧಾರಾವಿ ಸಯಾನ್‌ ಪಶ್ಚಿಮದ ಶಾಖೆಯಲ್ಲಿ ಆ. 21ರಂದು ಆಚರಿಸಲಾಯಿತು.

Advertisement

ಮುಖ್ಯ ಅತಿಥಿಯಾಗಿದ್ದ ಭಾರತ್‌ ಬ್ಯಾಂಕ್‌ನ ಸ್ಥಾಪಕ ಸದಸ್ಯರಲ್ಲೊಬ್ಬರಾದ ಹೊನ್ನಯ್ಯ ಪೂಜಾರಿ ಅವರು ಇತರ ಗ್ರಾಹಕರೊಂದಿಗೆ ದೀಪ ಬೆಳಗಿಸಿ, ಕೇಕ್‌ ಕತ್ತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಹಿಂದಿನ ದಿನಗಳನ್ನು ಸ್ಮರಿಸಿದ ಹೊನ್ನಯ್ಯ ಪೂಜಾರಿ ಅವರ ಬ್ಯಾಂಕ್‌ನ ಅಭಿವೃದ್ಧಿ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಹಾವೇರಿ: ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ

ಕಾರ್ಯಕ್ರಮದಲ್ಲಿ ವಿಟuಲ್‌ ಪವಾರ್‌, ಅಲಾಹು ಸುಂದರ್‌ ಉದಿಯಾರ್‌, ಗಿರೀಶ್‌ ವಾರಿಯಾ, ವಾಮನ್‌ ಕರ್ಕೇರ, ದಿನೇಶ್‌ ಜೈನ್‌ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಖೆಯ ಪ್ರಬಂಧಕ ಧರ್ಮನಾಥ್‌ ಆರ್‌. ಪೂಜಾರಿ, ಉಪ ಪ್ರಬಂಧಕಿ ಜಯಶ್ರೀ ಎ. ಅಮೀನ್‌, ಇತರ ಸಿಬಂದಿ ಆಶಾ ರಮೇಶ್‌ ಕೋಟ್ಯಾನ್‌, ದಿಶಾಶ್ರೀ ಜಯ ಪೂಜಾರಿ, ರಂಜನಿ ಎನ್‌. ಅಯ್ಯರ್‌, ಶ್ರೇಯಾ ಸಾಲ್ಯಾನ್‌, ಶ್ರೀನಿವಾಸ್‌ ಅಂಚನ್‌ ಮತ್ತಿತರರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next