Advertisement

Bharamasagara: ಡೆಂಗ್ಯೂ ಜ್ವರಕ್ಕೆ ಯುವಕ ಬಲಿ

11:39 PM Jul 01, 2024 | Team Udayavani |

ಭರಮಸಾಗರ: ಸಮೀಪದ ಮುದ್ದಾಪುರ ಗ್ರಾಮದಲ್ಲಿ ಡೆಂಗ್ಯೂ ರೋಗದಿಂದ ಬಳಲುತ್ತಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿ ಆಗದೆ ದಾವಣಗೆರೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ.

Advertisement

ಸಮೀಪದ ಮುದ್ದಾಪುರ ಗ್ರಾಮದ ನಿವಾಸಿ ಸಂತೋಷ್ (34) ಮೃತ ಯುವಕ.

ಕಳೆದ ನಾಲ್ಕಾರು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಸಂತೋಷ್ ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಹೆಚ್ಚಿನ ಅಸ್ವಸ್ಥತೆ ಕಂಡುಬಂದ ಕಾರಣ ಅವರನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆ ತಲುಪುವ ವೇಳೆಗೆ ವೈಟ್ ಪ್ಲೇಟ್ಸ್ ಸಂಖ್ಯೆ ತೀವ್ರತರವಾಗಿ ಕುಸಿತವಾಗಿತ್ತು. ಡೆಂಗ್ಯೂ ಉನ್ನತ ಹಂತ ತಲುಪಿದ್ದರಿಂದ ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದರು ಎಂದು ಮೃತ ಸಂತೋಷ್ ತಂದೆ ಸೋಮಶೇಖರಪ್ಪ , ಸ್ನೇಹಿತ ಚೌಡಪ್ಪ ತಿಳಿಸಿದರು.

ಮೃತ ಸಂತೋಷ್ ಗ್ರಾಮದಲ್ಲಿ ಸ್ನೇಹ ಜೀವಿಯಾಗಿದ್ದರು. ಇಬ್ಬರು ಮಕ್ಕಳು ಮತ್ತು ಪತ್ನಿ ಸೇರಿದಂತೆ ಬಂಧುಗಳನ್ನುಅಗಲಿದ್ದಾರೆ. ಮುದ್ದಾಪುರ ಗ್ರಾಮದಲ್ಲಿ ಸೋಮವಾರ ಸಂಜೆ ಅಂತ್ಯಸಂಸ್ಕಾರ ನಡೆಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.

Advertisement

ಈ ಬಗ್ಗೆ ಚಿತ್ರದುರ್ಗ ಆರೋಗ್ಯ ಇಲಾಖೆ ಅಧಿಕಾರಿಗಳು ಡೆಂಗ್ಯೂ ಬಗ್ಗೆ ನಮಗೆ ನಿಖರ ಮಾಹಿತಿ ದೃಡಪಟ್ಟಿಲ್ಲ ಎಂದು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next