Advertisement

ಗಾಳಿ-ಮಳೆಯಿಂದ ಅಡಿಕೆ ಬೆಳೆಗೆ ಹಾನಿ

04:15 PM May 13, 2020 | Naveen |

ಭರಮಸಾಗರ: ಸಮೀಪದ ಹೆಗ್ಗೆರೆ ಗ್ರಾಮದಲ್ಲಿ ಸೋಮವಾರ ಬಿರುಗಾಳಿ ಸಹಿತ ಮಳೆಗೆ ನೂರಕ್ಕೂ ಹೆಚ್ಚು ಅಡಿಕೆ ಮರಗಳು ಹಾಗೂ ಇತರೆ ಮರಗಳು ಧರೆಗೆ ಉರುಳಿವೆ.

Advertisement

ಹತ್ತಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿ ಅಪಾರ ನಷ್ಟ ಉಂಟಾಗಿದೆ. ಉಮೇಶ್‌ ಎಂಬುವವರ ಅಡಿಕೆ ತೋಟದಲ್ಲಿ 60 ಅಡಿಕೆ ಮರಗಳು, 10 ತೇಗ, ಒಂದು ತೆಂಗಿನಮರ, ತಿಪ್ಪೇಸ್ವಾಮಿ, ಸಿ.ಎನ್‌. ರಾಜಪ್ಪ ಎಂಬುವವರ ತೋಟದಲ್ಲಿ ತಲಾ 10 ಅಡಿಕೆ ಮರಗಳು, 5 ತೇಗದ ಮರಗಳು, ಯೋಗೀಶ್‌ ಎಂಬುವವರ ತೋಟದಲ್ಲಿ ಹತ್ತಕ್ಕೂ ಹೆಚ್ಚು ಅಡಿಕೆ ಮರಗಳು ಉರುಳಿ ಬಿದ್ದಿವೆ.ರಸ್ತೆಗೆ ಬೇವಿನ ಮರಗಳು ಬಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು.

ರಸ್ತೆಗೆ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ಆಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವಿದ್ಯುತ್‌ ಪರಿವರ್ತಕ ಕಂಬ ಉರುಳಿ ಗ್ರಾಮದ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿದೆ. ಅಲ್ಲಲ್ಲಿ ವಿದ್ಯುತ್‌ ತಂತಿ ಹರಿದು ಬಿದ್ದಿದ್ದು, ಕಂಬಗಳು ನೆಲಕ್ಕೆ ಬಿದ್ದಿವೆ. ಬಿರುಗಾಳಿ ಮಳೆಯಿಂದ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ನೀಡಬೇಕು ಎಂಬುದಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next