Advertisement
ಭರಮಸಾಗರ: ಇಲ್ಲಿನ ಭರಮಸಾಗರ-ಗೊಲ್ಲರಹಟ್ಟಿ, ಕೊಳಹಾಳು ಗೊಲ್ಲರಹಟ್ಟಿ, ಬೇವಿನಹಳ್ಳಿ, ಇಸಾಮುದ್ರ ಗೊಲ್ಲರಹಟ್ಟಿ, ಮುದ್ದಾಪುರ, ಅಜ್ಜಪ್ಪನಹಳ್ಳಿ ಗ್ರಾಮಗಳಲ್ಲಿ ಕುರಿ ಮತ್ತು ಮೇಕೆಗಳಿಗೆ ವಿಚಿತ್ರ ಕಾಯಿಲೆಯೊಂದು ಕಳೆದ ಹದಿನೈದು ದಿನಗಳಿಂದ ಕಾಡತೊಡಗಿದೆ. ಇದರಿಂದ ಈವರೆಗೆ ಸುಮಾರು 100ಕ್ಕೂ ಹೆಚ್ಚು ಕುರಿ ಮತ್ತು ಮೇಕೆಗಳು ಸಾವನ್ನಪ್ಪಿವೆ.
Related Articles
Advertisement
ಕೃಷಿ ಜೊತೆಗೆ ಕೆಲವರು ಕುರಿ ಮೇಕೆ ಸಾಕಾಣಿಕೆ ನಡೆಸಿದರೆ ಕೆಲವರು ಇದನ್ನೇ ಮೂಲ ಉದ್ಯೋಗವನ್ನಾಗಿ ತೊಡಗಿಸಿಕೊಂಡಿದ್ದಾರೆ. (ಕೆಲ ಕುರಿ, ಮೇಕೆ ಸಾಕಾಣಿಕೆದಾರರು ಕಾಲು ಬಾಯಿ ಲಸಿಕೆ ಹಾಕಿಸದೆ ನಿರ್ಲಕ್ಷ್ಯ ತೋರಿದ ಕಾರಣ ಕೆಲ ಕುರಿ, ಮೇಕೆಗಳಲ್ಲಿ ಇದೀಗ ಕಾಲುಬಾಯಿ ರೋಗ ಕೂಡ ಕಾಣಿಸಿಕೊಂಡಿದೆ.) ಚಿತ್ರದುರ್ಗ ತಾಲೂಕಿನ ಕೆಲ ಹಳ್ಳಿಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಕುರಿ ಮೇಕೆಗಳಿಗೆ ಇಂಥ ವಿಚಿತ್ರ ಕಾಯಿಲೆಯ ಭಾದೆ ಕಾಡುತ್ತಿದೆ ಎನ್ನಲಾಗುತ್ತಿದೆ.
ಸಾಲಸೂಲ ಮಾಡಿ ತಂದ ಕುರಿ, ಮೇಕೆಗಳು ಹೀಗೆ ಸಾವನ್ನಪ್ಪಿದರೆ ಸಾಕಾಣಿಕೆದಾರರು ಸಾಲದ ಶೂಲೆಗೆ ಸಿಲುಕುತ್ತಿದ್ದಾರೆ. ಇತ್ತ ಇವುಗಳಿಗೆ ವಿಮೆ ಸೌಲಭ್ಯವಿದೆ. ಆದರೆ ಹಲವು ಸಾಕಾಣಿಕೆದಾರರಿಗೆ ವಿಮೆ ಸೌಲಭ್ಯದ ಮಾಹಿತಿಯೇ ಇಲ್ಲದೆ ಅದರ ಪ್ರಯೋಜನವನ್ನು ಪಡೆಯದೆ ನಷ್ಟ ಎದುರಿಸುತ್ತಿದ್ದಾರೆ. ಎಲ್ಲೆಲ್ಲಿ ಕುರಿ, ಮೇಕೆಗಳ ಸಾಕಾಣಿಕೆಯಿದೆ ಅಲ್ಲೆಲ್ಲ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ.ಕೆಲವರು ಮುಂಜಾಗ್ರತೆವಹಿಸಿರುವ ಕಾರಣ ಆಗಬಹುದಾದ ಹಾನಿ ತಪ್ಪಿದೆ ಎಂಬ ಮಾತುಗಳು ಕುರಿ ಸಾಕಾಣಿಕೆದಾರರಲ್ಲಿ ಕೇಳಿಬರುತ್ತಿದೆ.