Advertisement

ಭಗವದ್ಗೀತೆ ವಿಶ್ವಮಾನ್ಯ ಗ್ರಂಥ

10:51 AM Aug 26, 2019 | Naveen |

ಭಾಲ್ಕಿ: ಕೃಷ್ಣ ಮುಖೋದ್ಗತವಾಗಿ ಬಂದಂತಹ ಭಗವದ್ಗೀತೆಯ ವಾಣಿಯು ವಿಶ್ವಮಾನ್ಯವಾಗಿದೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿ ರಾಧಾ ಹೇಳಿದರು.

Advertisement

ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಆಶ್ರಮದಲ್ಲಿ ರವಿವಾರ ನಡೆದ ಶ್ರೀಕೃಷ್ಣ ಜಯಂತಿ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮನುಷ್ಯ ಏನು ಮಾಡಬೇಕು. ಏನು ಮಾಡಬಾರದು ಇವೆರಡನ್ನೂ ಹೇಳುವವನು ಒಬ್ಬ ಸಮರ್ಥ ಗುರುವಾಗುತ್ತಾನೆ. ಕೃಷ್ಣನನ್ನು ಹೀಗೆ ಜಗದ್ಗುರುವನ್ನಾಗಿ ಮಾಡಿದ್ದೇ ಭಗವದ್ಗೀತೆ. ವ್ಯಕ್ತಿಯೊಬ್ಬನ ಮನೋವಿಕಾಸ, ಏಕಾಗ್ರತೆ, ಸ್ವಯಂ ನಿಯಂತ್ರಣ, ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು, ಜ್ಞಾನ, ಮೌಲ್ಯಗಳು, ಕರ್ತವ್ಯ, ಕೆಲಸ, ಕ್ರಿಯೆ, ಅರ್ಪಣೆ, ನಾಯಕತ್ವ, ಅಂತಿಮ ಲಕ್ಷ, ಯಶಸ್ಸಿನ ಮೂಲಭೂತ ಸಂಗತಿಗಳನ್ನು ಭಗವದ್ಗೀತೆ ಕಲಿಸುತ್ತದೆ. ಆದ್ದರಿಂದಲೇ ಇಂದು ಜಗತ್ತಿನ ಪ್ರಸಿದ್ಧ ಗುರು ಶ್ರೀಕೃಷ್ಣನ ಜನ್ಮ ದಿನಾಚರಣೆಯನ್ನು ದೇಶ ವಿದೇಶಗಳಲ್ಲೂ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಇದೇ ವೇಳೆ ಪಟ್ಟಣದ ಕೆಲ ಮಕ್ಕಳು ಶ್ರೀ ಕೃಷ್ಣ ಹಾಗೂ ರಾಧೆಯ ವೇಷ ಧರಿಸಿದ್ದು,ಎಲ್ಲರ ಗ‌ಮನ ಸೆಳೆಯಿತು. ಸುಭಾಷ ಕಾರಮುಂಗೆ, ಬಾಬುರಾವ ಗಾಮಾ, ವಿಠ್ಠಲ ರಾವ್‌ ಅಮದಾಬಾದೆ, ಲಕ್ಷ್ಮಣರಾವ್‌ ಪವಾರ, ಬಾಬುರಾವ ಬಿಚಕುಂದೆ, ಶಿವಕುಮಾರ ಕಲ್ಯಾಣಿ, ಮಂಗಲಾ ಕಾರಮುಂಗೆ, ಕೋಮಲ ಪಾಟೀಲ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next