Advertisement

ಕೋವಿಡ್ ಓಡಿಸಲು ಜಾಗೃತಿ

01:51 PM Apr 17, 2020 | Naveen |

ಭಾಲ್ಕಿ: ಏಪ್ರಿಲ್‌ 15 ರಿಂದ ಮೇ-3 ರವರೆಗೆ ಲಾಕ್‌ ಡೌನ್‌-2 ವಿಸ್ತರಣೆಯಾಗಿದ್ದು, ಸಾರ್ವಜನಿಕರು ಇದಕ್ಕೆ ಕೈ ಜೋಡಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಶಾಸಕ ಈಶ್ವರ ಖಂಡ್ರೆ ಹುರಿದುಂಬಿಸಿದ್ದು, ಅವರ ಮನೆ ಎದುರಿಗಿನ ರಸ್ತೆ ಮೇಲೆ ಕೋವಿಡ್ ಕುರಿತಂತೆ ಚಿತ್ರವೊಂದನ್ನು ಬಿಡಿಸಲಾಗಿದೆ.

Advertisement

ಭಾಲ್ಕಿ ಕೊರೊನಾ ಟಾಸ್ಕ್ಫೋರ್ಸ್‌ ಎನ್ನುವ ಯುವಕರ ತಂಡವೊಂದು ಶಾಸಕರ ಮನೆ ಎದುರಿನ ರಸ್ತೆಯ ಮೇಲೆ, ಕೋವಿಡ್ ವೈರಸ್‌ನ ಚಿತ್ರ ಬಿಡಿಸಿ, “ನೀನು ಹೊರಗೆ ಬಂದರೆ ನಾನು ನಿಮ್ಮ ಮನೆಗೆ ಬರುವೆ’ ಎನ್ನುವ ಚಿತ್ರ ಬಿಡಿಸಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು. ಇವರ ಕಾರ್ಯಕ್ಕೆ ಶಾಸಕರು ಬೆಂಬಲಿಸಿದರು. ಅಲ್ಲದೇ ಪಟ್ಟಣದ ಚಿತ್ರಕಲಾವಿದರು, ಮತ್ತಿತರರು ತಮ್ಮ ಬೈಕ್‌ ಮೇಲೆ ಲಾಕ್‌ಡೌನ್‌ ನಿಯಮ ಪಾಲಿಸಿ ಮನೆಯಲ್ಲಿರಿ ಎನ್ನುವ ನಾಮಫಲಕ ಹಾಕಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ. ಈ ಕುರಿತು ವಾಟ್ಸ್‌ ಆ್ಯಪ್‌ ಹಾಗೂ ಇನ್ನಿತರ ಸೋಷಿಯಲ್‌ ಮೀಡಿಯಾಗಳಲ್ಲೂ ಮಾಹಿತಿ ಹರಿದಾಡುತ್ತಿವೆ.

ಜಾಗೃತಿ ಮೂಡಿಸಲು ಮುಂದಾದ ಯುವಕರು ಎಚ್ಚರಿಕೆಯಿಂದಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು, ಕೋವಿಡ್ ವೈರಾಣು ಮುಕ್ತ ದೇಶವನ್ನಾಗಿಸಲು ಸಹಕರಿಸಬೇಕು.
ಈಶ್ವರ ಖಂಡ್ರೆ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next