Advertisement

ಮುದ್ರಾಡಿ ಭಕ್ರೆ ಮಠ: ವಾರ್ಷಿಕ ಕೆಂಡದ ಹಬ್ಬ ಸಂಪನ್ನ

10:07 PM Mar 14, 2021 | Team Udayavani |

ಹೆಬ್ರಿ: ಕಾರ್ಕಳ ತಾಲೂಕಿನ ಮುದ್ರಾಡಿ ಬಕ್ರೆ ಮಠದ ಭದ್ರಕಾಳಿ ದುರ್ಗಾಪರಮೇಶ್ವರೀ ದೇವಿಯ ಸನ್ನಿಧಿಯಲ್ಲಿ ಮಾ.14ರಂದು ವಾರ್ಷಿಕ ಕೆಂಡದ ಹಬ್ಬ ಸೇವೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೇವಸ್ಥಾನದ ಮ್ಯಾನೇಜಿಂಗ್‌ ಟ್ರಸ್ಟಿ ಡಾ| ಮುದ್ರಾಡಿ ವಾಸುದೇವ ಭಟ್ಟ ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು.

Advertisement

ಮಧ್ಯಾಹ್ನ ಮಹಾಪೂಜೆ, ನವ ಚಂಡಿಕಾ ಯಾಗ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. ಕ್ಷೇತ್ರದಲ್ಲಿ ಪ್ರಾತಃಕಾಲ ಪೂಜೆ, ಮಹಾಗಣಪತಿ ಯಾಗ, ತೋರಣ ಪ್ರತಿಷ್ಠೆ, ಸ್ವಸ್ತಿವಾಚನ, ಪಂಚಾಮƒತ ಅಭಿಷೆೇಕ, ಅಲಂಕಾರ ಪೂಜೆ ಅರ್ಚನೆ, ಚಂಡಿಕಾಯಾಗ, ದೀಪಾರಾಧನೆ ಪೂಜೆ, ಪ್ರಸನ್ನ ಪೂಜೆ, ಉತ್ಸವ ಬಲಿ, ಕಟ್ಟೆಪೂಜೆ, ಹಚ್ಚಡ ಸೇವೆ, ದೀವಟಿಗೆ ಸೇವೆ, ನಾಗ ಹಾಲಿಟ್ಟು ಸೇವೆ, ರಂಗಪೂಜೆಯ ಕೆಂಡ ಸೇವೆ, ರಂಗಪೂಜಾ ಬಲಿ, ಬ್ರಹ್ಮಸ್ಥಾನದಲ್ಲಿ ರಂಗಪೂಜೆ ಬಲಿ, ಧರ್ಮ ದೆ„ವದ ಕೋಲ, ಮಹಾಪೂಜೆ ಮಂಗಳಾರತಿ, ಭೂತ ಬಲಿ, ಮಹಾ ಪ್ರಸಾದ ವಿತರಣೆ ತುಲಾಭಾರ ಸೇವೆಗಳು ನಡೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯದರ್ಶಿ ರಾಮಕೃಷ್ಣ ಭಟ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next