Advertisement

ಭಜನೆ ತರಬೇತಿ ಪಡೆದವರ ಜವಾಬ್ದಾರಿ ಹೆಚ್ಚು: ಡಾ|ಡಿ. ವೀರೇಂದ್ರ ಹೆಗ್ಗಡೆ

11:07 AM Oct 01, 2018 | Team Udayavani |

ಬೆಳ್ತಂಗಡಿ: ಆಧುನಿಕ ಆಕರ್ಷಣೆಗಳು ಯುವಕರ ಶಕ್ತಿ ಗುಂದಿಸುತ್ತಿದ್ದು, ಭಜನೆಯಲ್ಲಿ ತೊಡಗಿದಾಗ ಅವರಿಗೆ ತಮ್ಮ ಶಕ್ತಿಯ ಅರಿವಾಗುತ್ತದೆ. ಭಜನೆ ತರಬೇತಿ ಪಡೆದ ಯುವಜನಾಂಗಕ್ಕೆ ದುಶ್ಚಟಮುಕ್ತ ಸಮಾಜ ನಿರ್ಮಾಣದ ಜತೆಗೆ ಗ್ರಾಮದ ಅಭಿವೃದ್ಧಿಯ ಜವಾಬ್ದಾರಿಯೂ ಇರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ರವಿವಾರ ಕ್ಷೇತ್ರದ ಅಮೃತ ವರ್ಷಿಣಿ ಸಭಾಭವನದಲ್ಲಿ ಭಜನೋತ್ಸವ ಹಾಗೂ 20ನೇ ವರ್ಷದ ಭಜನ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಜನೆಗೆ ವ್ಯಕ್ತಿತ್ವವನ್ನು ಪರಿವರ್ತಿಸುವ ಶಕ್ತಿಯಿದ್ದು, ಅದು ಆತನ ಶುದ್ಧೀಕರಣವನ್ನೂ ಮಾಡುತ್ತದೆ. ಇದು ಅಪಾರ ವಾದ ಶಕ್ತಿ ಹಾಗೂ ತೇಜಸ್ಸನ್ನೂ ಹೊಂದಿರುತ್ತದೆ ಎಂದರು.

ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿ, ಯುವಜನಾಂಗ ದೊಡ್ಡ ಸಂಖ್ಯೆ ಯಲ್ಲಿ ಭಜನೆಯಲ್ಲಿ ತೊಡಗುವು ದೆಂದರೆ ಅದು ಭಕ್ತಿಯ ಜಾಗತಿಕ ಲೋಕ ಸೃಷ್ಟಿಗೆ ಸಮನಾಗಿರುತ್ತದೆ. ಈ ಕಾರ್ಯದ ಮೂಲಕ ಸಹಸ್ರ ಕಂಠ ದಿಂದ ದಾಸವಾಣಿ ಕೇಳುವ ಭಾಗ್ಯ ಲಭಿಸಿರುವುದು ನಮ್ಮೆಲ್ಲರ ಪುಣ್ಯ ಎಂದರು.
ಶ್ರೀಧಾಮ ಮಾಣಿಲ ಶ್ರೀ ಮೋಹನ ದಾಸ ಸ್ವಾಮೀಜಿ, ಶಾಸಕ ಹರೀಶ್‌ ಪೂಂಜಾ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಹೇಮಾವತಿ ವಿ. ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರ ಕುಮಾರ್‌, ಶ್ರದ್ಧಾ ಅಮಿತ್‌ ಕುಮಾರ್‌, ಡಾ| ಯಶೋವರ್ಮ, ಸೋನಿ ಯಶೋ ವರ್ಮ ವೇದಿಕೆಯಲ್ಲಿದ್ದರು.

ಭಜನ ಕಮ್ಮಟದ ಕಾರ್ಯದರ್ಶಿ ಮಮತಾ ರಾವ್‌ ವರದಿ ಮಂಡಿಸಿದರು. ಭಜನ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್‌ ಸ್ವಾಗತಿಸಿದರು. ಬಿ. ಜಯರಾಮ ನೆಲ್ಲಿತ್ತಾಯ ವಂದಿ ಸಿದರು. ಶ್ರೀನಿವಾಸ ರಾವ್‌ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದ ಆರಂಭದಲ್ಲಿ ಸುಮಾರು 3,000 ಭಜನಪಟುಗಳಿಂದ ಆಕರ್ಷಕ ಶೋಭಾ ಯಾತ್ರೆ ನಡೆಯಿತು.

ಹಾಡಿದ ಪುನೀತ್‌!


ಚಿತ್ರನಟ ಪುನೀತ್‌ರಾಜ್‌ಕುಮಾರ್‌ ಮಾತನಾಡಿ, ಧರ್ಮಸ್ಥಳವೆಂಬ ಹೆಸರಿನಲ್ಲೇ ವಿಶೇಷವಾದ ಶಕ್ತಿಯಿದೆ. ಹಿಂದಿನಿಂದಲೂ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಪಡೆಯುತ್ತಿದ್ದೇನೆ. ತಂದೆಯವರ ಜತೆ ಚಿತ್ರೀಕರಣದಲ್ಲೂ ಪಾಲ್ಗೊಂಡಿದ್ದೇನೆ ಎಂದರು. ಡಾ| ಹೆಗ್ಗಡೆಯವರು ಹಾಗೂ ಗಣ್ಯರ ಆಗ್ರಹದ ಮೇರೆಗೆ ಪುನೀತ್‌, “ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ’ ಹಾಡನ್ನು ಹಾಡಿ ರಂಜಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next