Advertisement

ಶ್ರೀ ವೆಂಕಟರಮಣ ಭಜನ ಮಂಡಳಿಯವರಿಂದ ಭಜನೆ

04:16 PM Sep 18, 2018 | Team Udayavani |

ಮುಂಬಯಿ: ವಸಾಯಿರೋಡ್‌ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಬಾಲಾಜಿ ಸೇವಾ ಸಮಿತಿ ಶ್ರೀ ವೆಂಕಟರಮಣ  ಭಜನ  ಮಂಡಳಿ ಅವರಿಂದ ಭಜನ ಕಾರ್ಯಕ್ರಮವು ಸೆ. 16ರಂದು ಸಂಜೆ ವಸಾಯಿಗಾಂವ್‌ ಕೋಳಿವಾಡಾದ ಶ್ರದ್ಧಾನಂದ ವೃದ್ಧಾಶ್ರಮದಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ನಡೆಯಿತು.

Advertisement

ಸುಮಾರು ಎರಡು ತಾಸುಗಳ ಕಾಲ ಭಜನ ಕಾರ್ಯಕ್ರಮ ನಡೆಯಿತು. ಮಂಡಳಿಯವರು ಮರಾಠಿ ಭಜನೆಗಳನ್ನು ಹಾಡಿ ನೆರೆದ ಭಕ್ತಾದಿಗಳನ್ನು ರಂಜಿಸಿದರು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಮಲ್ಪೆ ವಿಶ್ವನಾಥ ಪೈ, ತಬಲಾದಲ್ಲಿ ಪುರುಷೋತ್ತಮ ಶೆಣೈ ಅವರು ಸಹಕರಿಸಿದರು. ಶ್ರದ್ಧಾನಂದ ವೃದ್ಧಾಶ್ರಮದ ಅಸಿಸ್ಟೆಂಟ್‌ ಸುಪರಿಂ ಟೆಂಡೆಂಟ್‌ ಅರುಂಧತಿ ಡೊಲಾಸ್‌, ಸಹಾಯಕಿ ಅರ್ಚನಾ, ವಿಶ್ವಸ್ತರಾದ ಜಗದೀಶ್‌ ಶೆಟ್ಟಿ  ಹಾಗೂ  ಸಿಬಂದಿ ವರ್ಗದವರು ಉಪಸ್ಥಿತರಿದ್ದರು.

ಬಾಲಾಜಿ ಸಮಿತಿಯ ಸಂಚಾಲಕ ದೇವೇಂದ್ರ ಭಕ್ತ, ಕಾರ್ಯದರ್ಶಿ ಪುರು ಷೋತ್ತಮ ಶೆಣೈ, ಸಹ ಕಾರ್ಯದರ್ಶಿ ವಿವೇಕಾನಂದ ಭಕ್ತ, ಸತ್ಯೇಂದ್ರ ನಾಯಕ್‌, ಜತೆ ಕೋಶಾಧಿಕಾರಿ ವಿಶ್ವನಾಥ್‌ ಪೈ, ಉಪಾಧ್ಯಕ್ಷ ಶ್ರೀನಿವಾಸ ಪಡಿಯಾರ್‌, ಸದಸ್ಯರಾದ ರಾಮಕೃಷ್ಣ ಹೆಗ್ಡೆ, ವೆಂಕಟೇಶ್‌ ಪೈ, ಬಾಲಕೃಷ್ಣ ಪೈ, ಶ್ಯಾಮಸುಂದರ್‌ ಆಚಾರ್ಯ, ಯುವ ವಿಭಾಗದ ಉಪಾಧ್ಯಕ್ಷ ಪಲ್ಲವಿ ಶೆಣೈ ಅವರು ಉಪಸ್ಥಿತರಿದ್ದು ಸಹಕರಿಸಿದರು. ಶ್ರದ್ದಾನಂದ ವೃದ್ಧಾಶ್ರಮದವರು ಭಜನ ಮಂಡಳಿಯವರಿಗೆ ಪ್ರಸಾದ ವನ್ನಿತ್ತು ಗೌರವಿಸಿದರು. ಕೊನೆಯಲ್ಲಿ ಫಲಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next