Advertisement

Bhairathi Ranagal: ಕಾವಲಿಗನಾದ ಭೈರತಿ ರಣಗಲ್‌

06:52 PM Oct 09, 2024 | Team Udayavani |

ಶಿವರಾಜ್‌ಕುಮಾರ್‌ ನಟನೆಯ “ಭೈರತಿ ರಣಗಲ್‌’ ಚಿತ್ರ ನವೆಂಬರ್‌ 15ರಂದು ತೆರೆಕಾಣುತ್ತಿದೆ. ಈ ಚಿತ್ರದ ಲಿರಿಕಲ್‌ ವಿಡಿಯೋವೊಂದನ್ನು ತಂಡ ಬಿಡುಗಡೆ ಮಾಡಿದೆ.

Advertisement

“ಕಾವಲಿಗ’ ಎಂಬ ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. “ಕಾವಲಿಗ ಕಾವಲಿಗ ಕಂಬನಿಗೆ ಕಾವಲಿಗ, ಕಾವಲಿಗ ಕಾವಲಿಗ ನಂಬಿಕೆಗೆ ಕಾವಲಿಗ’ ಎಂಬ ಸಾಲುಗಳು ಗಮನ ಸೆಳೆಯುತ್ತಿವೆ.

ಇನ್ನು, ನರ್ತನ್‌ ನಿರ್ದೇಶನದ ಈ ಸಿನಿಮಾವನ್ನು ಶಿವರಾಜ್‌ ಕುಮಾರ್‌ ಅವರೇ ನಿರ್ಮಿಸುತ್ತಿದ್ದಾರೆ. ಇದು “ಮಫ್ತಿ’ ಸಿನಿಮಾ ಪ್ರೀಕ್ವೆಲ್‌ ಎನ್ನಲಾಗಿದ್ದು, ಟೀಸರ್‌ ಆ್ಯಕ್ಷನ್‌ನಿಂದ ಕೂಡಿದೆ. ಚಿತ್ರದ ಬಗ್ಗೆ ಮಾತನಾಡುವ ಶಿವಣ್ಣ, “ಭೈರತಿ ರಣಗಲ್‌ನ ಸಣ್ಣ ಕಥೆಯನ್ನು ಇಲ್ಲಿ ಬೆಳೆಸಲಾಗಿದೆ. ಯಾಕೆ ಅವನು ಭೈರತಿ ರಣಗಲ್‌ ಆಗುತ್ತಾನೆ. ಜನರಿಗೆ ಯಾಕೆ ಅವನ್ನು ಕಂಡರೆ ಅಷ್ಟು ಪ್ರೀತಿ ಎಂದು ಹೇಳಲಾಗಿದೆ.

ಹೆಚ್ಚು ಆಡಂಬರವಿಲ್ಲದೆ, ಸರಳವಾಗಿ ಈ ವಿಷಯವನ್ನು ಹೇಳಲಾಗಿದೆ. ಇಲ್ಲಿ ಎಷ್ಟು ಮಾತು ಬೇಕೋ, ಅಷ್ಟಿದೆ. ನರ್ತನ್‌ ತುಂಬಾ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್‌ ನಾಯಕಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next