Advertisement

Sandalwood: ಶಿವಣ್ಣ ಭೈರತಿ ಮುಂದಕ್ಕೆ?

12:01 PM Jun 19, 2024 | Team Udayavani |

ಶಿವರಾಜ್‌ಕುಮಾರ್‌ ನಿರ್ಮಿಸಿ, ನಟಿಸುತ್ತಿರುವ “ಭೈರತಿ ರಣಗಲ್‌’ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆಯಾಗು ವುದಾಗಿ ಘೋಷಿಸಿಕೊಂಡಿತ್ತು. ಆದರೆ, ಸದ್ಯ ಗಾಂಧಿನಗರ ದಿಂದ ಕೇಳಿಬರುತ್ತಿರುವ ಸುದ್ದಿ ಪ್ರಕಾರ “ಭೈರತಿ’ ಕೂಡಾ ತನ್ನ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದು, ಆಗಸ್ಟ್‌ 15ಕ್ಕೆ ತೆರೆಕಾಣು ತ್ತಿಲ್ಲ ಎನ್ನಲಾಗಿದೆ.

Advertisement

ಅದಕ್ಕೆ ಕಾರಣ ಸಿನಿಮಾ ಸಾಕಷ್ಟು ಕೆಲಸಗಳು ಬಾಕಿ ಇರುವುದು. ಇನ್ನೂ 10 ರಿಂದ 15 ದಿನಗಳ ಚಿತ್ರೀಕರಣದ ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಆಗಬೇಕಿದೆ. ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿರುವ ಕುರಿತು ಪ್ರತಿಕ್ರಿಯಿಸಿದ ನಿರ್ದೇಶಕ ನರ್ತನ್‌, “ಸದ್ಯಕ್ಕೆ ಆ ಬಗ್ಗೆ ನಾನು ಏನೂ ಹೇಳುವುದಕ್ಕಾಗುವುದಿಲ್ಲ. ಈ ಕುರಿತು ಶಿವರಾಜ್‌ಕುಮಾರ್‌ ಅವರ ಜೊತೆ ಮೀಟಿಂಗ್‌ ನಡೆಯು ತ್ತಿದೆ’ ಎಂದಿದ್ದಾರೆ. ಇನ್ನು, “ಪುಷ್ಪ’ ಹಾಗೂ “ಭೈರತಿ’ ಮುಂದಕ್ಕೆ ಹೋಗಿರುವ ಸುದ್ದಿ ಸಿನಿಮಾ ವಲಯದಲ್ಲಿ ಚರ್ಚೆಯಾ ಗುತ್ತಿದ್ದು, ಆ ಡೇಟ್‌ಗೆ ಬರಲು ಬೇರೆ ಸ್ಟಾರ್‌ ಸಿನಿಮಾವೊಂದು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next