Advertisement

ಲಾಡ್ಜ್ ನಲ್ಲಿ ಕ್ವಾರಂಟೈನ್‌ಗೆ ವಿರೋಧ

04:27 PM May 16, 2020 | Naveen |

ಭದ್ರಾವತಿ: ನಗರಕ್ಕೆ ಚೆನ್ನೈನಿಂದ ಆಗಮಿಸಿರುವ ದಂಪತಿಗೆ ನಗರದ ಬಿ.ಎಚ್‌.ರಸ್ತೆಯಲ್ಲಿರುವ ಪದ್ಮ ರೆಸಿಡೆನ್ಸಿಯಲ್ಲಿ ಕ್ವಾರಂಟೆ„ನ್‌ ಮಾಡಿರುವದನ್ನು ಅಲ್ಲಿನ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ತೀವ್ರ ಆಕೋÅಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆಯಿತು.

Advertisement

ಜನರ ಆಕ್ರೋಶ ಹೆಚ್ಚಾದಂತೆ ಸ್ಥಳಕ್ಕೆ ಪೊಲೀಸ್‌ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಬಂದ ನಂತರ ಜನರನ್ನು ನಿಯಂತ್ರಿಸಿ ಹೊರರಾಜ್ಯದಿಂದ ಬಂದ ದಂಪತಿಗಳನ್ನು ಪದ್ಮ ರೆಸಿಡೆನ್ಸಿಯ ಕೊಠಡಿಯಲ್ಲಿ ಕ್ವಾರಂಟೈನ್‌ ನಲ್ಲಿಡಲಾಯಿತು. ನಗರಸಭಾ ಆಯುಕ್ತ ಮನೋಹರ್‌ ಮಾತನಾಡಿ, ಭದ್ರಾವತಿ ಮೂಲದ ದಂಪತಿಗಳು ಇಲ್ಲಿಗೆ ಇಂದು ಚೆನ್ನೈನಿಂದ ಬಂದಿದ್ದು, ಸದರಿ ಮಹಿಳೆ ಗರ್ಭಿಣಿ ಆಗಿದ್ದು, ಸರ್ಕಾರದ ಕೋವಿಡ್‌-19 ನಿಯಮಾವಳಿಗಳಂತೆ ಎಲ್ಲ ರೀತಿಯ ಪರೀಕ್ಷೆ ಮಾಡಲಾಗಿದೆ. ಇಬ್ಬರಿಗೂ ಕೊರೋನಾ ನೆಗೆಟಿವ್‌ ಬಂದಿದೆ. ನಿಯಮಾನುಸಾರವಾಗಿ ಹೊರರಾಜ್ಯದಿಂದ ಬಂದವರನ್ನು ಕಡ್ಡಾಯವಾಗಿ ಹೋಂ ಕ್ವಾರಂಟೈನ್
ಹೊರತುಪಡಿಸಿ ಬೇರೆಡೆ ಕ್ವಾರಂಟೈನ್‌ನಲ್ಲಿ ಇರಸಬೇಕಾದ ಕಾರಣ ಇವರಿಬ್ಬರನ್ನು ಪದ್ಮ ರೆಸಿಡೆನ್ಸಿಯಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಮಾಜಿ ಶಾಸಕರ ಭೇಟಿ: ಸ್ಥಳಕ್ಕೆ ಮಾಜಿ ಶಾಸಕ ಎಂ.ಜೆ.ಅಪ್ಪಾಜಿ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ| ಗಾಯತ್ರಿ, ಸಹಾಯಕ ಅಧಿ ಕಾರಿ ನೀಲೇಶ್‌, ನಗರಸಭೆ ಇಂಜಿನೀಯರ್‌ ರುದ್ರೇಗೌಡ, ನಂಜಪ್ಪ, ಡಾ| ಸುನಿತಾ ನಂಬಿಯಾರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next