Advertisement

ಕೋವಿಡ್‌ 19 ತಡೆಗೆ ಎಚ್ಚರವಹಿಸಿ: ಸಂಸದೆ

05:11 AM Jul 02, 2020 | Team Udayavani |

ಭಾರತೀನಗರ: ಕೋವಿಡ್‌ 19 ತಡೆಗಾಗಿ ಸಾರ್ವಜನಿಕರು ಎಚ್ಚರವಹಿಸಬೇಕು. ಇಲ್ಲದಿದ್ದರೆ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಸಂಸದೆ ಸುಮಲತಾ ತಿಳಿಸಿದರು. ಬಿದರಹಳ್ಳಿ ಗ್ರಾಪಂನಿಂದ ನಿರ್ಮಿಸಿರುವ ಶುದ್ಧ ನೀರಿನ ಘಟಕ ಉದ್ಘಾಟಿಸಿ ಮಾತನಾಡಿ, ಕೋವಿಡ್‌ 19 ಬಡವರು, ಶ್ರೀಮಂತರು ಎಂದು ನೋಡುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು. ಗುಂಪಾಗಿ ನಿಲ್ಲುವುದನ್ನು ಕಡಿಮೆ ಮಾಡಬೇಕು.

Advertisement

ಶುದ್ಧ ನೀರಿನ ಘಟಕವನ್ನು  ಬಳಸಿಕೊಳ್ಳಬೇಕು. ನೀರನ್ನು ಮಿತವಾಗಿ ಬಳಸಿ ಎಂದರು. ಬಿದರಹೊಸಹಳ್ಳಿ ಗ್ರಾಮದ ಸಮುದಾಯ ಭವನಕ್ಕೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಿದರಹೊಸಹಳ್ಳಿ ಸರ್ಕಾರ ಪ್ರೌಢಶಾಲೆಗೆ ಕಾಂಪೌಂಡ್‌ ನಿರ್ಮಿಸುವಂತೆ  ಸಂಸದರಿಗೆ  ಮನವಿ ಸಲ್ಲಿಸಲಾಯಿತು. ತಹಶೀಲ್ದಾರ್‌ ಎಚ್‌.ವಿಜಿಕುಮಾರ್‌, ಇಒ ಮುನಿರಾಜು, ಡಿವೈಎಸ್‌ಪಿ ಪೃಥ್ವಿ, ಜಿಪಂ ಸದಸ್ಯ ಎ.ಎಸ್‌.ರಾಜೀವ್‌, ಗ್ರಾಪಂ ಅಧ್ಯಕ್ಷ ಚಿಕ್ಕಹನುಮೇಗೌಡ, ಪಿಡಿಒ ಮಹದೇವು, ತಾಪಂ ಸದಸ್ಯ ದೇವೇಗೌಡ, ಉಪಾಧ್ಯಕ್ಷ  ನಾಗೇಶ್‌, ಬೇಲೂರು ಸೋಮಶೇಖರ್‌ ಇದ್ದರು.

ಕೂಲಿಕಾರರ ಮನವಿ: ಉದ್ಯೋಗ ಖಾತರಿ ಯೋಜನೆಯಡಿ 200 ದಿನ ಕೆಲಸ ನೀಡಬೇಕು. ದಿನದ ಕೂಲಿ 600 ರೂ ಹೆಚ್ಚಿಸಬೇಕು. ಮೈಷುಗರ್‌ ಕಾರ್ಖಾನೆ ಸರ್ಕಾರದ ಸ್ವಾಮ್ಯದಲ್ಲೇ ಉಳಿಸುವಂತೆ ಸದನದಲ್ಲಿ ಚರ್ಚಿಸಬೇಕು ಎಂದು  ಕೃಷಿಕೂಲಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಸಂಸದೆ ಸುಮಲತಾ ಅವರಿಗೆ ಮನವಿ ಸಲ್ಲಿಸಿದರು. ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್‌ ಮತ್ತು ಪದಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next